ಗಣಪತಿ ವಿಸರ್ಜನೆ ವೇಳೆಯಲ್ಲಿ ಕಟ್ಟೆಯಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಮುದಿಗೆರೆ ಗ್ರಾಮದಲ್ಲಿ ಭಾನುವಾರ ಜರುಗಿದೆ.
ತುಮಕೂರಿನ ಭೀಮಸಂದ್ರದ ನಿವಾಸಿ ಚೇತನ್(15) ಮೃತ ವಿದ್ಯಾರ್ಥಿ, ಚೇತನ್ ಹೆಗ್ಗೆರೆ ಬಳಿಯಲ್ಲಿರುವ ಚೇತನ್ ಎವೆರೆಸ್ಟ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ.
ಗಣೇಶ ವಿಸರ್ಜನೆ ಮಾಡುವುದಕ್ಕೆ ಶಾಲೆಯ ಆಡಳಿತ ಮಂಡಳಿಯು ಚೇತನನ್ನು ಮುದಿಗೆರೆಯ ಕಟ್ಟೆಗೆ ಇಳಿಸಿದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೋಲಿಸರು ಶಾಲಾ ಅಡಳಿತ ಮಂಡಳಿ ವಿರುದ್ದ ಕೇಸ್ ದಾಖಲಿಸಿಕೊಂಡಿದ್ದಾರೆ.