ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲ್ಲೂಕಿನ ಬಾವಿಯಾಳು ಗ್ರಾಮದಲ್ಲಿ ನಡೆದಿದೆ.
ರವಿಶಂಕರ್ (40), ವೀಣಾ (28) ಮೃತ ದಂಪತಿ.ಇದನ್ನು ಓದಿ –ಪಂಜಾಬ್ನಲ್ಲಿ ಒಬ್ಬ ಶಾಸಕನಿಗೆ ಒಂದೇ ಬಾರಿ ಪಿಂಚಣಿ – 100 ಕೋಟಿ ರು ಉಳಿತಾಯ : ಸಿಎಂ
ಪತ್ನಿ ವೀಣಾ ಮನೆ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ತಂತಿಗೆ ಬಟ್ಟೆ ಒಣ ಹಾಕುತ್ತಿದ್ದರು.
ಈ ವೇಳೆ ವಿದ್ಯುತ್ ತಗುಲಿದಾಗ ಪತ್ನಿ ವೀಣಾ ಕೂಗಿಕೊಂಡಿದ್ದಾರೆ. ಪತ್ನಿ ವೀಣಾರನ್ನ ಕೈಯಿಂದ ಎಳೆದುಕೊಳ್ಳಲು ಪ್ರಯತ್ನಿಸಿದಾಗ ಇಬ್ಬರಿಗೂ ಶಾಕ್ ಹೊಡೆದಿದೆ. ಪರಿಣಾಮ ಗಂಡ ಹೆಂಡತಿ ಒಟ್ಟಿಗೆ ಜೀವ ಬಿಟ್ಟಿದ್ದಾರೆ.
ಸ್ಥಳಕ್ಕೆ ಮಾಯಕೊಂಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.