ಸ್ಟ್ಯಾಂಡ್ ನಲ್ಲಿದ್ದ ಶೂನಲ್ಲಿ ಬೃಹತ್ ಗಾತ್ರದ ನಾಗರಹಾವು ಕಂಡು ಮನೆ ಮಾಲೀಕರು ಬೆಚ್ಚಿಬಿದ್ದ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಜರುಗಿದೆ ನಂತರ ಬೃಹತ್ ನಾಗರಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.
ಗೋಕುಲಂ ಬಡಾವಣೆಯ ಮನೆ ಮಾಲೀಕ ಸತ್ಯನಾರಾಯಣ್ ಮನೆಯ ಹೊರಗಡೆ ಇಟ್ಟಿದ್ದ ಚಪ್ಪಲಿ ಸ್ಟ್ಯಾಂಡ್ನಲ್ಲಿ ಬೃಹತ್ ಗಾತ್ರದ ನಾಗರಹಾವು ಪ್ರತ್ಯಕ್ಷವಾಗಿದೆ.ಇದನ್ನು ಓದಿ –ಭಾರೀ ಮಳೆಗೆ ಮನೆ ಮೇಲೆ ಬಿದ್ದ ಮರ-ಮಲಗಿದ್ದಲ್ಲೇ ಇಬ್ಬರು ಮಹಿಳೆಯರ ಸಾವು
ಈ ವೇಳೆ ಮನೆ ಮಾಲೀಕ ಹಾವನ್ನ ಗಮನಿಸದೆ ಚಪ್ಪಲಿ ಸ್ಟ್ಯಾಂಡ್ಗೆ ಕೈ ಹಾಕಲು ಮುಂದಾಗಿದ್ದಾರೆ. ತಕ್ಷಣ ಬುಸುಗುಟ್ಟಿವ ನಾಗರಾಜನ ಸದ್ದು ಕೇಳಿ ಮನೆ ಮಾಲೀಕ ಬೆಚ್ಚಿ ಬಿದ್ದಿದ್ದಾರೆ.
ಕೂಡಲೇ ಮನೆ ಮಾಲೀಕರು, ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಸ್ನೇಕ್ ಶ್ಯಾಮ್ ಅವರು ಹಾವನ್ನು ರಕ್ಷಣೆ ಮಾಡಿದ್ದಾರೆ.
ಮಳೆ ಹಾಗೂ ತಣ್ಣನೆಯ ವಾತಾವರಣದಿಂದ ಹಾವುಗಳು ಬೆಚ್ಚಗಿನ ಪ್ರದೇಶ ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಆಗಮಿಸುತ್ತಿದೆ ಮನೆ ಹೊರ ಭಾಗದಲ್ಲಿಟ್ಟಿರುವ ಹೆಲ್ಮೆಟ್, ಶೂ ಸೇರಿದಂತೆ ಕಬೋರ್ಡ್ ಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಿವೆ.
- ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
- ಇಬ್ಬರು ಮಕ್ಕಳು ಬಿಸಿಲ ಝಳಕ್ಕೆ ಬಲಿ
- ರಾಜ್ಯದಲ್ಲಿ ಇಂದಿನಿಂದ ನರೇಂದ್ರ ಮೋದಿ ಪ್ರಚಾರ
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ