ಚಾಮರಾಜನಗರ – ಉಡುಪಿಯ ಏಜೆನ್ಸಿ ಸಾಯಿ ಸೆಕ್ಯೂರಿಟಿ ಅವರಿಗೆ ವರ್ಕ್ ಆರ್ಡರ್ ಮತ್ತು ಸ್ಯಾಲರಿ ಕ್ರೆಡಿಟ್ ಬಿಲ್ನ್ನು ಪಿ.ಜಿ. ಪಾಳ್ಯ ಪಿ.ಹೆಚ್.ಸಿ ಗೆ. ಕಳುಹಿಸಿಕೊಡಲು ಚಾಮರಾಜನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಎಫ್.ಡಿ.ಎ, ಮಹೇಶ್ ಎಂಬುವವರು 3 ಸಾವಿರ ರು ಲಂಚ ಸ್ವೀಕರಿಸುವ ಮುನ್ನ ACB ಬಲೆಗೆ ಬಿದ್ದಿದ್ದಾರೆ.
ಏಜೆನ್ಸಿ ಯವರು ವರ್ಕ್ ಆರ್ಡರ್ ಮತ್ತು ಸ್ಯಾಲರಿ ಕ್ರೆಡಿಟ್ ಬಿಲ್ನ್ನು ನೀಡಲು ಸಲುವಾಗಿ 5 ಸಾವಿರ ರೂ ಲಂಚದ
ಹಣವನ್ನು ಕೊಡುವಂತೆ ಮಹೇಶ್ ಬೇಡಿಕೆ ಇಟ್ಟಿದ್ದರು. ಇದನ್ನು ಓದಿ –ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಬೇಡ: ಸಿಎಂಗೆ ಸುಮಲತಾ ಪತ್ರ
ಪಿರ್ಯಾದಿಯವರು ಎಫ್.ಡಿ.ಎ. ಮಹೇಶ್ರವರನ್ನು ಡಿ.ಹೆಚ್.ಓ ಕಚೇರಿಯಲ್ಲಿ ಇಂದು ಸಂಪರ್ಕಿಸಿ
3,000ರು ಲಂಚದ ಹಣ ಕೊಡುವಂತೆ ಪಿರ್ಯಾದಿಯವರಿಗೆ ಬೇಡಿಕೆ ಇಟ್ಟು ಒತ್ತಾಯಿಸಿದರು.
ಆರೋಪಿ ಸರ್ಕಾರಿ ನೌಕರ ಮಹೇಶ್, ಪ್ರಥಮ ದರ್ಜೆ ಸಹಾಯಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಚಾಮರಾಜನಗರ ಜಿಲ್ಲೆ ಇವರು, ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಪಿರ್ಯಾದುದಾರರಿಂದ 3,000 ರುಗಳ ಲಂಚದ ಹಣವನ್ನು ಸ್ಟೀಕರಿಸುವ ವೇಳೆ ,ACB SP ಸಜಿತ್ ಮಾರ್ಗದರ್ಶನದಲ್ಲಿ ಚಾಮರಾಜನಗರ ಜಿಲ್ಲೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನಡೆಸಿದ ಟ್ರಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಇದನ್ನು ಓದಿ – ನಿಖಿಲ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ: ಮಾಜಿ ಸಿಎಂ ಹೆಚ್ಡಿ ಕೆ
FDA ಮಹೇಶ್ ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ಪ್ರಕರಣದ ತನಿಖೆ ಮುಂದುವರೆದಿದೆ.
- ಹೆಚ್.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್ ಆಸ್ಪತ್ರೆಗೆ ಶಿಫ್ಟ್!
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ