March 11, 2026

Newsnap Kannada

The World at your finger tips!

police 1

ಹೆಣ್ಣುಮಕ್ಕಳ ಜತೆಗೆ ಅಸಭ್ಯ ವರ್ತನೆ: ಮೈಸೂರಿನ ಕಾಮುಕ ಶಿಕ್ಷಕ ಕೆಲಸದಿಂದಲೇ ವಜಾ

Spread the love

ವಸತಿ ಶಾಲೆಯ ಗಣಿತ ಶಿಕ್ಷಕ ದೊರೆಸ್ವಾಮಿ ಎಂಬಾತ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿರುವ ಆರೋಪದ ಮೇಲೆ ಕೆಲಸದಿಂದ ವಜಾಗೊಳಿಸಲಾಗಿದೆ

ಈ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕು ಹಿರೇಹಳ್ಳಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಯಲ್ಲಿ ವೃತ್ತಿ ಶಿಕ್ಷಕನೇ ಶಿಕ್ಷೆಗೆ ಗುರಿಯಾಗಿದ್ದಾನೆ.ಇದನ್ನು ಓದಿ –ಪಾಕಿಸ್ತಾನದ ಮೂರು ವರ್ಷ ಮಗುವನ್ನು ಪಾಕ್ ಪಡೆಗಳಿಗೆ ಹಸ್ತಾಂತರ

ಶಾಲೆ ಮಕ್ಕಳಿಗೆ ಅಲರ್ಜಿ ಆಗುತ್ತೆ ಕುತ್ತಿಗೆ ಚೈನ್ ತೆಗೆಯಿರಿ ಎಂದು ಹತ್ತಿರ ತೆರಳಿ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಅಂತಾ ಎಲ್ಲಾ ವಿದ್ಯಾರ್ಥಿನಿಯರು‌ ಉಪವಾಸ ಧರಣಿ ‌ನಡೆಸಿದ್ದರು. ಧರಣಿ ಬಳಿಕ ರಾತ್ರಿ ಊಟ ಮಾಡಿದ ಬಳಿಕ ಸುಮಾರು 40ಕ್ಕು ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಕೆಲ ಮಕ್ಕಳು ಹೆಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಸಿಒ ಪ್ರಭಾ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

ವಿದ್ಯಾರ್ಥಿನಿಯರ ಅಹವಾಲು ಆಲಿಸಿದ ಪಿಸಿಒ ಕಾಮುಕ ಶಿಕ್ಷಕ ದೊರೆಸ್ವಾಮಿಯನ್ನು ಕೆಲಸದಿಂದ ವಜಾಮಾಡಿದ್ದಾರೆ.

error: Content is protected !!