ಬೆಂಗಳೂರು ಸಿಸಿಬಿ ಪೋಲಿಸರು ಅಪ್ಪ ಏಜಾಜ್ ಖಾನ್, ಮಗ ಚೋರ್ ಇಮ್ರಾನ್ ಸೈಯದ್ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ 15 ಹೊಸ ಪ್ರಕರಣಗಳು ಬೆಳಕಿಗೆ ಬಂದಿದಿವೆ
ಬಂಧಿತರಿಂದ 1ಕೆಜಿ 300 ಗ್ರಾಂ ಚಿನ್ನಾಭರಣ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನು ಓದಿ –ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಎತ್ತಂಗಡಿ – ಸಂಗಪ್ಪ ಹೊಸ ಡಿಸಿ
ಕಳ್ಳತನ ಹೇಗೆ ಮಾಡುವುದು ಮತ್ತು ಪೋಲಿಸರು ಹೇಗೆ , ಯಾವ ದಿಕ್ಕಿನಲ್ಲಿ ತನಿಖೆ ಮಾಡುತ್ತಾರೆ? ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಅಪ್ಪನೇ ಮಗನಿಗೆ ತರಬೇತಿ ನೀಡಿ ಈತನ ಸಾಲು ಸಾಲು ಕೃತ್ಯಕ್ಕೆ ಕಾರಣನಾಗಿದ್ದಾನೆ ಎಂಬ ಅಂಶವು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಚೋರ್ ಇಮ್ರಾನ್ಗೆ 15 ವರ್ಷವಿದ್ದಾಗಿನಿಂದ ಕಳ್ಳತನಕ್ಕೆ ಟ್ರೈನಿಂಗ್ ಕೊಟ್ಟಿದ್ದು ಸ್ವಂತ ತಂದೆಯಂತೆ. ಎಂಥದ್ದೆ ಭದ್ರತೆ ಇರುವ ಮನೆಗಳಲ್ಲೂ ಹತ್ತೇ ನಿಮಿಷಕ್ಕೆ ಮನೆಗಳ ಬೀಗ ಮುರಿದು ಕಳವು ಮಾಡ್ತಿದ್ದನಂತೆ. ಬಹಳ ಹಿಂದೆ ಪೊಲೀಸ್ ಮಾಹಿತಿದಾರ ಆಗಿದ್ದ ಅಪ್ಪ ಎಜಾಜ್ ಖಾನ್ ಮಗ ಚೋರ್ ಇಮ್ರಾನ್ಗೆ ಚಿಕ್ಕವಯಸ್ಸಿನಲ್ಲೇ ಕಳ್ಳತನದ ಟ್ರೇನಿಂಗ್ ಕೊಡ್ತಿದ್ದನಂತೆ.