ಮಂಡ್ಯ ಜಿಲ್ಲೆಯ ರೈತನೊಬ್ಬ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 30 ಲಕ್ಷ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ನಿಂಗರಾಜು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಾಮನಹಳ್ಳಿ ರೈತ.
ನಿಂಗರಾಜು ಮಗ ಅರುಣ್ ಕುಮಾರ್ ಪಿಎಸ್ಐ ಪರೀಕ್ಷೆ ಬರೆದಿದ್ದನು. ಈ ವೇಳೆ ನಿಂಗರಾಜು ಜತೆ ಆರೋಪಿ ಮಂಜುನಾಥ್ ಅಲಿಯಾಸ್ ಅಕ್ಷಯ್ ಎಂಬಾತ ನನಗೆ ಪ್ರಭಾವಿಗಳ ಪರಿಚಯವಿದೆ. ನಿಮ್ಮ ಮಗನಿಗೆ ನಾನು ಕೆಲಸ ಕೊಡಿಸುತ್ತೇನೆ ಎಂದು ಹೇಳಿದನು.ಇದನ್ನು ಓದಿ –ಅಗ್ನಿಪತ್ ಯೊಜನೆಯ ನೇಮಕಾತಿಗೆ ತೀವ್ರ ವಿರೋಧ : ಮಂಡ್ಯದಲ್ಲಿ – ಪ್ರತಿಭಟನೆ
ಮಂಜುನಾಥ ಎಂಬಾತ 40 ಲಕ್ಷ ಕೊಟ್ರೆ ಪಿಎಸ್ಐ ಕೆಲಸ ಕೊಡಿಸುವುದಾಗಿ ರೈತ ನಿಂಗರಾಜು ಜತೆ ಮಾತುಕತೆ ನಡೆಸುತ್ತಾನೆ. ಮಾತು ಕತೆ ಬಳಿಕ 38 ಲಕ್ಷ ಕೊಡುವುದಾಗಿ ರೈತ ನಿಂಗರಾಜು ಒಪ್ಪಿದ್ದಾನೆ. ಆದ ಬಳಿ ತನ್ನ ಬಳಿಯಿದ್ದ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿ 17ಲಕ್ಷ ವನ್ನು ಬ್ಯಾಂಕ್ ಮೂಲಕ ಆರ್ಟಿಜಿಎಸ್ ಹಾಗೂ 13.25 ಲಕ್ಷ ಕ್ಯಾಶ್ ನೀಡಿದ್ದಾನೆ.
ಪಿಎಸ್ಐ ಲಿಸ್ಟ್ನಲ್ಲಿ ಮಗನ ಹೆಸರು ಬಾರದಿದ್ದಾಗ ರೈತ ಕಂಗಾಲಾಗಿ ಮಂಜುನಾಥ್ ಬಳಿ ಹಣವನ್ನು ವಾಪಾಸ್ ಕೇಳಿದಾಗ 30ಲಕ್ಷ ನೀಡದೆ ಸಬೂಬು ಮಾತುಗಳಿಂದ ವಂಚಿಸಿದ್ದಾನೆ.
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ
- ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ