ಮಂಡ್ಯದ ಮುಸ್ಕಾನ್ ಪೋಲಿಸರಿಗೆ ಮಾಹಿತಿ ನೀಡದೇ ಸೌದಿಗೆ ಟೂರ್ ! ಸಂಶಯಕ್ಕೆ ಎಡೆಯಾದ ಈಕೆಯ ನಡೆ

Team Newsnap
1 Min Read

ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ರಾತ್ರೋ ರಾತ್ರಿ ಖ್ಯಾತಿಯಾಗಿದ್ದ ಮಂಡ್ಯದ ಮುಸ್ಕಾನ್ ಪೋಲಿಸರಿಗೆ ಯಾವುದೇ ಮಾಹಿತಿ ನೀಡದೇ ಸೌದಿ ಅರೇಬಿಯಾಗೆ ಟೂರ್ ಹೋಗಿರುವ ಸಂಗತಿ ಬಯಲಾಗಿದೆ, ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ವಿಶ್ವಾದ್ಯಂತ ಮುಸ್ಲಿಂ ವ್ಯಕ್ತಿ ಹಾಗೂ ಸಂಘಟನೆಗಳಿಂದ ಪ್ರಶಂಸೆ, ಬಹುಮಾನಗಳನ್ನು ಗಿಟ್ಟಿಸಿದ್ದಳು.

ಮುಸ್ಕಾನ್ ಆಕೆಯ ಕುಟುಂಬದವರಿಗೆ ಉಗ್ರ ಸಂಘಟನೆಗಳ ನಂಟಿದೆ. ಈ ಕುರಿತಂತೆ ತನಿಖೆ ನಡೆಸುವಂತೆ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ವಿಶ್ವಾದ್ಯಂತ ಮುಸ್ಲಿಂ ವ್ಯಕ್ತಿ ಹಾಗೂ ಸಂಘಟನೆಗಳಿಂದ ಪ್ರಶಂಸೆ, ಬಹುಮಾನಗಳನ್ನು ಗಿಟ್ಟಿಸಿದ್ದಳು ,ಪೋಲಿಸರಿಗೆ ದೂರು ನೀಡಿದ್ದರೂ ಪೋಲಿಸರು ನಿರ್ಲಕ್ಷ್ಯ ಮಾಡಿದ್ದಾರೆಂದು ದೂರಲಾಗಿದೆ.

ಇದನ್ನು ಓದಿ :PSI ನೇಮಕಾತಿ ಅಕ್ರಮ: ನಾಗಮಂಗಲ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರತ್ ಬಂಧನ

ಏ 25 ರಂದೇ ಮುಸ್ಕಾನ ಹಾಗೂ ಆಕೆಯ ಕುಟುಂಬದವರು ಸೌದಿಗೆ ಪ್ರವಾಸಕ್ಕೆ ಹೋದ ಹಿನ್ನೆಲೆಯಲ್ಲಿ ಪೋಲಿಸರು ಈಗ ಆಕೆಯ ಮೇಲೆ ನಿಗಾ ಇಟ್ಟಿದ್ದಾರೆಂದು ಹೇಳಲಾಗಿದೆ.

ಮುಂಬೈ ಶಾಸಕ ಸೇರಿದಂತೆ ದೇಶದ ಬಹುತೇಕ ಮುಸ್ಲಿಂ ನಾಯಕರು ಈ ಗಟ್ಟಿತನಕ್ಕೆ ಮೆಚ್ಚಿ ನಗದು, ಬಹುಮಾನ ಗಳನ್ನು ನೀಡಿ ಬೆಂಬಲಿಸಿದ್ದರು. ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನೂ ಮಂಡ್ಯದ ಮುಸ್ಕಾನ ಧೈರ್ಯವನ್ನು ಮೆಚ್ಚುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ ಸಂಗತಿಯೂ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಈಗ ಮುಸ್ಕಾನ ಸೌದಿಗೆ ಪ್ರವಾಸಕ್ಕೆ ಹೋಗಿರುವ ಹಿಂದಿನ ಸತ್ಯವನ್ನು ಬಯಲಿಗೆ ತರಬೇಕಾದ ಹೊಣೆ ಪೋಲಿಸರ ಮೇಲಿದೆ.

Share This Article
Leave a comment