ಗಾಂಧಿನಗರ ಸುಖಸಾಗರ್ ಹೋಟೆಲ್ ನಲ್ಲಿ ಅಗ್ನಿ ಅವಘಡ ಬುಧವಾರ ಮಧ್ಯಾಹ್ನ ಸಂಭವಿಸಿದೆ
ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿ, ಸುಖ ಸಾಗರ್ ಹೋಟೆಲ್ನ ಟರೇಸ್ನಲ್ಲಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ
ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೋಟೆಲ್ ಟೆರೇಸ್ ನಲ್ಲಿ
ಮಾಡಿದ್ದ ಸ್ಟೋರ್ ರೂಂ ಮಾಡಲಾಗಿತ್ತು. ಸ್ಟೋರ್ ರೂಂನಲ್ಲಿ ಬೆಂಕಿ ಕಾಣಿಸಿಕೊಳ್ತಿದ್ದಂತೆ ಐದನೇ ಪ್ಲೋರ್ಗೆ ಆವರಿಸಿದೆ. ನಾಲ್ಕನೇ ಪ್ಲೋರ್ ನಲ್ಲಿ ಹಳೆ ಪರ್ನಿಚರ್ ಹಾಗೂ ಸೋಫಾ ಇಡಲಾಗಿತ್ತು.
ಹೋಟೆಲ್ನಲ್ಲಿ ಬೆಂಕಿ ಉರಿಯುತ್ತಿರೋದನ್ನ ಗಮನಿಸಿದ್ದ ಎಸ್.ಐ ರವಿ ಅವರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದು, ತಕ್ಷಣಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.