ದಳದ ಜನತಾ ಜಲಧಾರೆ ಯಾತ್ರೆಗೂ ಕೂಡ ಕೊರೊನಾ ಗ್ರಹಣ ಆವರಿಸಿದೆ.
ಕಾಂಗ್ರೆಸ್ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ದಳಪತಿಗಳು ಸಾರಿದ್ದ ಜಲಧಾರೆ ಯಾತ್ರೆ ಆರಂಭಕ್ಕೂ ಮುನ್ನವೇ ಅಂತ್ಯ ಕಂಡಿದೆ.
ಆ ಮೂಲಕ ವಿಪಕ್ಷಗಳ ನಡುವಿನ ಜಲಸಂಗ್ರಾಮಕ್ಕೆ ಕದನ ವಿರಾಮ ಘೋಷಣೆಯಾಗಿದೆ.
ಮೇಕೆದಾಟುವಿನಲ್ಲಿ ಪಾದಯಾತ್ರೆಯ ನಗಾರಿ ಬಾರಿಸಿ ದಳದ ಕೋಟೆಯೊಳಗೆ ಹೆಜ್ಜೆ ಹಾಕಲು ಮುಂದಾಗಿತ್ತು. ಆದ್ರೆ ಯಾತ್ರೆ ಮೇಲೆ ಕೊರೊನಾ ಗ್ರಹಣ ಬಡಿದು, ನಾಲ್ಕೇ ದಿನಕ್ಕೆ ಯಾತ್ರೆ ಅಂತ್ಯವಾಯ್ತು.
ಕೈ ಪಾಳಯ ಯಾತ್ರೆ ಘೋಷಿಸುತ್ತಿದ್ದಂತೆ ಅಲರ್ಟ್ ಆಗಿದ್ದ ದಳಪತಿಗಳು ಪ್ರತಿತಂತ್ರ ಹೆಣೆದು ಜನತಾ ಜಲಧಾರೆ ಹೆಸರಲ್ಲಿ ಜಲಸಂಗ್ರಾಮ ಸಾರಿ ಭವಿಷ್ಯಕ್ಕೆ ಬುನಾದಿ ಹಾಕಲು ಮುಂದಾಗಿದ್ದ ಅದಕ್ಕೆ ರೂಪುರೇಷೆ ಸಿದ್ಧವಾಗಿ, ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಆದ್ರೀಗ ದಳದ ಜನತಾ ಜಲಧಾರೆ ಯಾತ್ರೆ ನಡೆಯೋದೆ ಡೌಟ್ ಆಗಿದೆ.
ದಳಪತಿಗಳ ‘ಜಲಧಾರೆ’ ಯಾತ್ರೆಗೂ ಕೊರೊನಾ ಗ್ರಹಣ ಬಡಿದಿದೆ. ಆರಂಭಕ್ಕೆ ಮುನ್ನವೇ ಮಾಜಿ ಸಿಎಂ ಹೆಚ್ಡಿಕೆ ಘೋಷಿಸಿದ್ದ ‘ಜಲಧಾರೆ’ ಯಾತ್ರೆ ಅಂತ್ಯ ಕಾಣ್ತಿದೆ. ಆ ಮೂಲಕ ಕೈ-ದಳದ ನಡುವೆ ಶುರುವಾಗಿದ್ದ ಜಲ ಸಂಗ್ರಾಮಕ್ಕೆ ಕದನವಿರಾಮ ಘೋಷಣೆಯಾಗಿದೆ.
- ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು
- ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ
- ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ
- ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ