February 20, 2026

Newsnap Kannada

The World at your finger tips!

ravindra srikantaiah srirangapatna

ಕೊರೋನಾ ಸೋಂಕಿತರ ನೆರವಿಗೆ ಧಾವಿಸಿದ ಶ್ರೀರಂಗಪಟ್ಟಣ ಶಾಸಕ ರವೀಂದ್ರ : ಜಿಲ್ಲಾಡಳಿತಕ್ಕೆ ಮತ್ತೆ ತರಾಟೆ

Spread the love

ಶ್ರೀರಂಗಪಟ್ಟಣ ತಾಲೂಕಿಗೆ ತೀವ್ರವಾಗಿ ಬಾಧಿಸಿರುವ ಕೊರೊನಾ ಸೋಂಕಿತರ ನೆರವಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಧಾವಿಸಿದ್ದಾರೆ.

ಕೊರೋನಾ ಸೋಂಕಿತರ ನೆರವಿಗೆ ಧಾವಿಸದ ಜಿಲ್ಲಾಡಳಿತಕ್ಕೆ ಮತ್ತೆ ತರಾಟೆಗೆ ತೆಗೆದುಕೊಂಡು ಸಕಾ೯ರದ ವೈಫಲ್ಯಗಳ ವಿರುದ್ದ ಕಿಡಿಕಾರಿದರು.

ಶನಿವಾರ ಬೆಳಿಗ್ಗೆ ಶ್ರೀರಂಗಪಟ್ಟಣದ ಶ್ರೀ ರಂಗನಾಥ ಕಲ್ಯಾಣ ಮಂಟಪದ ಐಸೋಲೇಷನ್ ಕೇಂದ್ರಕ್ಕೆ ಭೇಟಿ ನೀಡಿ ನಿನ್ನೆ ರಾತ್ರಿ ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ಬಂದಿದ್ದ ಜನರ ಯೋಗಕ್ಷೇಮವನ್ನು ಶಾಸಕರು ವಿಚಾರಿಸಿದರು

ಕೋವಿಡ್ ಕೇಂದ್ರಕ್ಕೆ ಬೇಕಾಗಿರುವ ಸೌಕರ್ಯಗಳ ವ್ಯವಸ್ಥೆಗಳ ಕೊರತೆಗಳನ್ನು ಆಲಿಸಿ, ತಾಲೂಕು ಆಡಳಿತಕ್ಕೆ ತಾಕೀತು ಮಾಡಿ ತತ್ ಕ್ಷಣವೇ ವ್ಯವಸ್ಥೆಗಳನ್ನು ಮಾಡಿಸಿದರು

ಜೊತೆಗೆ ತಮ್ಮ ಕಡೆಯಿಂದ ಹಾಲು, ಬ್ರೆಡ್ ಮತ್ತು ಬಿಸ್ಕಿಟ್ ಗಳನ್ನು ತರಸಿಕೊಟಟ್ಟು ಹೃದಯವಂತಿಕೆ ತೋರಿದರುರವೀಂದ್ರ ಶ್ರೀಕಂಠಯ್ಯ ರವರು.

ಶಾಸಕರು ನ್ಯೂಸ್ ಸ್ನ್ಯಾಪ್ ಜೊತೆಯಲ್ಲಿ ಹಂಚಿಕೊಂಡ ಅಭಿಪ್ರಾಯದ ವಿಡಿಯೋ ತುಣುಕು ಇಲ್ಲಿದೆ:

error: Content is protected !!