ಊಟ ಮಾಡಿದ ಬಿಲ್ ಪಾವತಿಸಿ ಎಂದಿದ್ದಕ್ಕೆ ಪುಂಡರ ಗುಂಪೊಂದು ಡಾಬಾಗೆ ಬಂದು ಸಪ್ಲೈಯರ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯ ಬ್ಯಾಲಕೆರೆ ಬಳಿಯಿರುವ ಯೂಟರ್ನ್ ಡಾಬಾದಲ್ಲಿ ಜರುಗಿದೆ.
ಈ ಡಾಬಾಗೆ ಊಟಕ್ಕೆ ಬಂದಿದ್ದ ಪುಂಡರು ಊಟ ಮುಗಿಸಿ ಹೊರಟಿದ್ದಾರೆ. ಈ ವೇಳೆ ಆಗಮಿಸಿದ ಸಪ್ಲೈಯರ್ ಹಾಸನ ಮೂಲದ 19 ವಷ೯ದ ಯುವಕ ಊಟ ಮಾಡಿದ ಬಿಲ್ ಪಾವತಿಸಲು ಕೇಳಿದ್ದಾನೆ.
ಕುಪಿತಗೊಂಡ ದುಷ್ಟರ ತಂಡ ಸಪ್ಲೈಯರ್ಗೆ ಅವಾಜ್ ಹಾಕಿ ಅಲ್ಲಿಂದ ತೆರಳಿದ್ದಾರೆ. ಆ ಬಳಿಕ ಮಧ್ಯರಾತ್ರಿ 12:30 ಕ್ಕೆ ಡಾಬಾ ಬಳಿ ವಾಪಸ್ ಬಂದಿದ್ದ ಆರೋಪಿಗಳು ಪೆಟ್ರೋಲ್ ತಂದು ಡಾಬಾ ಬಾಗಿಲಿಗೆ ಚಿಲಕ ಹಾಕಿ ಬೆಂಕಿ ಹಚ್ಚಿದ್ದಾರೆ.
ಈ ವೇಳೆ ಒಳಗಡೆ ಊಟ ಮಾಡುತ್ತಿದ್ದ ಡಾಬಾ ಸಿಬ್ಬಂದಿ ಮನೋಜ್ ಬೆಂಕಿಯನ್ನು ಕಂಡು ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಬಾಗಿಲ ಬಳಿಗೆ ಓಡಿ ಬಂದಿದ್ದಾರೆ.
ಈ ವೇಳೆ ಆರೋಪಿಗಳು ಎರಚುತ್ತಿದ್ದ ಪೆಟ್ರೋಲ್ ಮನೋಜ್ ಮೇಲೆ ಬಿದ್ದು ಆತನಿಗೂ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಉಳಿದ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರವಾಗಿ ಗಾಯಗೊಂಡಿರುವ ಮನೋಜ್ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ
- ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು