ಕಂಠೀರವ ಸ್ಟುಡಿಯೋದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಧಿ ದಶ೯ನಕ್ಕೆ ಮಾತ್ರ ಸೀಮಿತವಾಗದೇ ಮದುವೆಗೂ ಸಾಕ್ಷಿಯಾಗಲಿದೆ.
ಬಳ್ಳಾರಿಯ ಗುರುರಾಜ್ ಹಾಗೂ ಗಂಗಾ ಜೋಡಿ ಪುನೀತ್ ಸಮಾಧಿ ಮುಂದೆ ಮದುವೆಯಾಗೋಕೆ ನಿರ್ಧರಿಸಿದೆ.
ಎರಡು ವರ್ಷದಿಂದ ಪ್ರೀತಿ ಮಾಡುತ್ತಿರುವ ಈ ಜೋಡಿಗಳು ಈಗಾಗಲೇ ಶಿವಣ್ಣ ಹಾಗೂ ರಾಘಣ್ಣರ ಬಳಿ ಅನುಮತಿ ಕೇಳಿದ್ದಾರೆ. ಮದುವೆಯಾಗೋಕೆ ಅನುಮತಿ ಕೊಟ್ಟಿದ್ದಾರೆ ಎನ್ನಲಾಗಿದೆ.
ನಾವಿಬ್ಬರು ಅಪ್ಪು ಅಪ್ಪಟ ಅಭಿಮಾನಿಗಳು. ಅವರ ಅಕಾಲಿಕ ಅಗಲಿಕೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ರೀತಿ ಸಮಾಧಿ ಮುಂದೆ ಮದುವೆಯಾದರೆ ಅವರಿಗೆ ಗೌರವ ನೀಡಿದ ಹಾಗೇ ಆಗುತ್ತೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎನ್ನುತ್ತಾರೆ ಈ ನವ ಜೋಡಿಗಳು.