January 29, 2026

Newsnap Kannada

The World at your finger tips!

ashish arrest

ಲಖೀಂಪುರ್ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಬಂಧನ : ಜೈಲು ಪಾಲು

Spread the love

ಉತ್ತರ ಪ್ರದೇಶದ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ಕಡೆಗೂ ಬಂಧಿಸಲಾಗಿದೆ.

ಎಸ್​​​ಯುವಿ ವಾಹನ ಓಡಿಸಿ ರೈತರ ಹತ್ಯೆಗೆ ಕಾರಣವಾದ ಆರೋಪ ಆಶಿಶ್​ ಮೇಲಿದೆ. ನಿನ್ನೆ ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದ್ದ ಎಸ್ಐಟಿ ತಂಡ, ಸಂಜೆ ವೇಳೆಗೆ ಆಶಿಶ್ ಮಿಶ್ರಾರನ್ನು ಬಂಧಿಸಿದೆ. ಬಂಧನದ ಬಳಿಕ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ನಾಳೆ ಪೊಲೀಸ್ ಕಸ್ಟಡಿಗೆ ನೀಡುವ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಎಸ್​​​ಯುವಿ ವಾಹನ ಓಡಿಸಿ ರೈತರ ಹತ್ಯೆಗೆ ಕಾರಣವಾದ ಆರೋಪ ಆಶಿಶ್​ ಮೇಲಿದ್ದು, ಬರೋಬ್ಬರಿ 9 ಸೆಕ್ಷನ್​​​ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ದಿನವಿಡೀ ವಿಚಾರಣೆ ನಡೆಸಿದ ಬಳಿಕ ಸಂಜೆ ವೇಳೆಗೆ ಆಶಿಶ್ ಮಿಶ್ರಾರನ್ನು ಉತ್ತರ ಪ್ರದೇಶದ ಎಸ್ಐಟಿ ತಂಡ ಬಂಧಿಸಿದೆ.

ನಿನ್ನೆ ಅಪರಾಧ ವಿಭಾಗ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಆಶೀಶ್ ಮಿಶ್ರಾರನ್ನು ಡಿಐಜಿ ಉಪೇಂದ್ರ ಅಗರವಾಲ್ & ಲಖಿಂಪುರ ಎಸ್‌ಡಿಎಂ ಸಮ್ಮುಖದಲ್ಲಿ ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಲಾಯಿತು.

ಈ ವೇಳೆ ತನಿಖಾ ತಂಡ ಸುಮಾರು 40 ಪ್ರಶ್ನೆಗಳನ್ನು ಕೇಳಿತ್ತು. ಪ್ರಮುಖವಾಗಿ ಘಟನೆ ದಿನ ಮಧ್ಯಾಹ್ನ 2:36ರಿಂದ 3:30 ರವರೆಗೆ ಎಲ್ಲಿದ್ದೀರಿ ಎಂಬ ಪ್ರಶ್ನೆ ಕೇಳಿತ್ತು. ಆಗ ತಾನು ಸ್ಥಳದಲ್ಲಿರಲಿಲ್ಲ ಅಂತ ವಿಡಿಯೋಗಳನ್ನ ತೋರಿಸಿದ್ದಾರೆ. ಅಲ್ಲದೆ 10 ಜನರ ಹೇಳಿಕೆಯ ಅಫಿಡವಿಟ್ ಅನ್ನು ಕೂಡ ಪೊಲೀಸರಿಗೆ ನೀಡಿದ್ದರು.

ವಿಚಾರಣೆಯ ವೇಳೆ ಆಶಿಶ್ ಅವರ ವಕೀಲರು ಕೂಡ ಅಲ್ಲಿ ಇದ್ದರು. ಆದ್ರೆ ಎಸ್​​ಐಟಿಯ ಪ್ರಶ್ನೆಗೆ ಆಶೀಶ್ ಮುಶ್ರಾ ತೃಪ್ತಿದಾಯಕವಾದ ಉತ್ತರ ನೀಡಿಲ್ಲ ಎನ್ನಲಾಗಿದೆ.

error: Content is protected !!