ಹಕ್ಕುಚ್ಯುತಿಗೆ “ಸಾರಿ” ಕೇಳಿದ ರೋಹಿಣಿ ಸಿಂಧೂರಿ – ಹೋರಾಟದಲ್ಲಿ ಸಾ.ರಾ ಗೆ ಜಯ

Team Newsnap
1 Min Read

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಕ್ಕು ಭದ್ಯತಾ ಸಮಿತಿ ಮುಂದೆ ಶಾಸಕ ಸಾ ರಾ ಮಹೇಶ್ ಗೆ ಅಗೌರವ ತೋರಿದ್ದಕ್ಕೆ ಕ್ಷಮೆ ಕೇಳಿದ್ದಾರೆ

ಕಳೆದ ಜನವರಿ 12 ರಂದು ನಡೆದ ಶಾಸಕ ಸಾ ರಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದಿದ ಸಭೆಯಲ್ಲಿ ಅಂದು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ತಮಗೆ ಹಾಗೂ ತಮ್ಮ ಅಧ್ಯಕ್ಷತೆಯ ಕಾಗದ ಪತ್ರ ಸಮಿತಿಗೆ ಅಗೌರವ ಹಾಗೂ ಉದ್ದಟತನ ತೋರಿ ನಡೆದುಕೊಂಡಿರುವ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡಿದ್ದರು.

ಈ ಕುರಿತಂತೆ ನಡೆದ ಹಕ್ಕು ಭಾದ್ಯತಾ ಸಮಿತಿ ಮುಂದೆ ರೋಹಿಣಿ ಸಿಂಧೂರಿ ಅಂದಿನ ಘಟನೆಯ ಬಗ್ಗೆ ಕ್ಷಮೆ ಕೇಳಿದ್ದಾರೆ .

ಇನ್ನು ಮುಂದೆ ಯಾವ ಶಾಸಕರು ಅಥವಾ ಯವುದೇ ಸಮಿತಿಯ
ಜೊತೆ ಉದ್ದಟತನದಿಂದ ನಡೆದುಕೊಳ್ಳುವುದಿಲ್ಲ. ಸರ್ಕಾರದ ಅದೇಶಗಳನ್ನು ಪಾಲಿಸುತ್ತೇನೆಂದು ರೋಹಿಣಿ ಹೇಳಿದ್ದಾರೆಂದು ಸಮಿತಿ ಮೂಲಗಳು ಹೇಳಿವೆ.

Share This Article
Leave a comment