February 22, 2026

Newsnap Kannada

The World at your finger tips!

kannaiah kumar

ಬಿಜೆಪಿ ಸಿದ್ಧಾಂತದಿಂದ ಭಾರತದ ಭವಿಷ್ಯ ಹಾಳು: ಕನ್ನಯ್ಯ ಕುಮಾರ್ ಆರೋಪ

Spread the love

ಬಿಜೆಪಿಯ ಸಿದ್ಧಾಂತಗಳು ಭಾರತದ ಮೌಲ್ಯಗಳು, ಸಂಸ್ಕೃತಿ, ಇತಿಹಾಸ ಹಾಗೂ ಭವಿಷ್ಯವನ್ನು ಹಾಳು ಮಾಡುತ್ತಿವೆ ಎಂದು ಕಾಂಗ್ರೆಸ್‌ನ ಯುವ ಮುಖಂಡ, ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯಕುಮಾರ್ ಆರೋಪಿಸಿದ್ದಾರೆ.


ನವದೆಹಲಿಯಲ್ಲಿ ಅವರು ಮಾತನಾಡಿ, ದೇಶದ ಅತಿ ಹಳೆಯ, ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷ ಕಾಂಗ್ರೆಸ್. ಆ ಪಕ್ಷವಿಲ್ಲದೆ ದೇಶ ಉಳಿಯಿದು. ಕಾಂಗ್ರೆಸ್ ಕೇವಲ ಪಕ್ಷವಲ್ಲ. ಅದು ಒಂದು ಆಲೋಚನೆ. ಆದ್ದರಿಂದ ಆ ಪಕ್ಷವನ್ನು ತಾವು ಸೇರಿರುವುದಾಗಿ ಹೇಳಿದರು.


ತಾವು ಪ್ರಜಾಪ್ರಭುತ್ವದ ಬಗ್ಗೆ ಒಲವು ಹೊಂದಿರುವುದಾಗಿ ಕನ್ನಯ್ಯ ಕುಮಾರ್ ತಿಳಿಸಿದರು. ಕಾಂಗ್ರೆಸ್ ಉಳಿದರೆ ಸಾಕಷ್ಟು ಜನರ ಮಹತ್ವಾಕಾಂಕ್ಷೆಗಳು, ಮಹಾತ್ಮಾಗಾಂಧಿಯವರ ಏಕತ್ವ ಹಾಗೂ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರ ಸಮಾನತೆ ನೀತಿಗಳು ರಕ್ಷಣೆಯಾಗುತ್ತವೆ ಎಂದರು.

error: Content is protected !!