ಬೆಂಗಳೂರಿನ ತಿಗುಳರಪಾಳ್ಯದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಂದೆ ಹಲ್ಲೇಗೆರೆ ಶಂಕರ್ ಕರಾಳ ಮುಖವನ್ನು ಪುತ್ರ ಮಧು ಸಾಗರ್ ಇಂಗ್ಲಿಷ್ ನಲ್ಲಿ ಬರೆದಿರುವ ಡೆತ್ ನೋಟ್ ನಲ್ಲಿ ಬಟಾ ಬಯಲು ಮಾಡಿದ್ದಾನೆ.
ಪತ್ರದಲ್ಲಿ ತಂದೆಯ ಕರಾಳ ಮುಖ ಹೇಗಿತ್ತು ಎನ್ನುವ ಮಾಹಿತಿ ಏನು?
- ನನ್ನ ತಂದೆ ಒಬ್ಬ ಸ್ಯಾಡಿಸ್ಟ್. ಅವರು ಆಫೀಸ್ ಗೆ ಹೋಗುವುದಕ್ಕೂ ಮುನ್ನ ಮನೆಯವರನ್ನು ಮನೆಯಲ್ಲೇ ಬೀಗ ಹಾಕಿ ಕೂಡಿ ಹಾಕಿ ಹೋಗುತ್ತಿದ್ದರು.
- ಅವರೊಬ್ಬರು ಸ್ಟಾಡಿಸ್ಟ್. ತನ್ನ ತಾಯಿ. ಅಕ್ಕಂದಿರನ್ನು ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದರು.
- ಆವರ ಕಿರುಕುಳ ನನ್ನನ್ನೂ ಬಿಡಲಿಲ್ಲ. ನಾನೂ ಕೆಲಸಕ್ಕೆ ರಾಜೀನಾಮೆ ಕೊಡುವಂತೆ ಮಾಡಿದರು.
- ನನ್ನ ತಂದೆಗೆ ಐವರು ಮಹಿಳೆಯರ ಜೊತೆ ಸಂಬಂಧ ಇತ್ತು. ಇಂತಹ ಸಂಬಂಧದ ಮಹಿಳೆಯೊಬ್ಬರ ಮಗಳನ್ನು ನಾನು ಮದುವೆ ಮಾಡಿಕೊಳ್ಳುವಂತೆ ಇತ್ತಡ ಹೇರಿದರು.
- ಮಹಿಳೆಯರ ಸಂಬಂಧಗಳ ಬಗ್ಗೆ ನನ್ನ ತಾಯಿ ಎಲ್ಲವನ್ನೂ ತಿಳಿದುಕೊಂಡಿದ್ದಳು. ಹೀಗಾಗಿಯೇ ಅಪ್ಪನನ್ನು ದೂರ ಇಟ್ಟಿದ್ದರು.
- ನನ್ನ ಅಕ್ಕಂದಿರಿಗೆ ಯಾವತ್ತೂ ಒಂದು ಇಂಚು ಆಸ್ತಿ ಕೊಡಲಿಲ್ಲ. ಅವರಿಬ್ಬರೂ ಗಂಡನಿಂದ ದೂರ ಮಾಡಿದ್ದೇ ನಮ್ಮ ಅಪ್ಪ.
- ನಮ್ಮ ಅಪ್ಪ ಹೊರಗಿನ ದೃಷ್ಟಿಯಲ್ಲಿ ತುಂಬಾ ಒಳ್ಳೆಯವರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಆದರೆ ನಿಜವಾದ ಮುಖವಾಡವೇ ಬೇರೆಯಾಗಿತ್ತು.
- ಅವನೊಬ್ಬ ಕುಡುಕ , ಸ್ಯಾಡಿಸ್ಟ್. ಅತನ ಒಳ ಪ್ರಪಂಚವೇ ಭಯಾನಕವಾಗಿತ್ತು. ಪ್ರತಿನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ರು.
ಈ ಪತ್ರದಲ್ಲಿ ಬರೆದಿರುವ ಎಲ್ಲಾ ಅಂಶಗಳ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ಬೆಂಗಳೂರಿನ ಬ್ಯಾಡರಹಳ್ಳಿ ಪೋಲಿಸರು ಶಂಕರ್ ಹಾಗೂ ಇಬ್ಬರು ಅಳಿಯಂದಿರಿಗೆ ವಿಚಾರಣೆಗಾಗಿ ನೋಟೀಸ್ ಜಾರಿ ಮಾಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ