January 28, 2026

Newsnap Kannada

The World at your finger tips!

ಪ್ರಮೋದ್ ಮುತಾಲಿಕ್

ಮನೆಯಲ್ಲಿ ಒಂದು ಶಸ್ತ್ರ ಇಡಲೇಬೇಕು: ಪ್ರಮೋದ್ ಮುತಾಲಿಕ್

Spread the love

ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ. ಆದರೆ ನಮ್ಮ ಮನೆಯಲ್ಲಿ ಒಂದೇ ಒಂದು ಶಸ್ತ್ರ ಇಲ್ಲ. ಹಾಗಾಗಿ ಒಂದು ಶಸ್ತ್ರವನ್ನಾದರೂ ಇಡಲೇಬೇಕು ಎಂದು ವಿವಾದಕ್ಕೆ ಕಾರಣವಾಗುಂತಹ ಹೇಳಿಕೆ ನೀಡಿದ್ದಾರೆ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್.


ಹುಬ್ಬಳ್ಳಿ-ಧಾರವಾಡ ನವನಗರದಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಅವರು ಮಾತನಾಡಿ, ನಮ್ಮ ಮನೆಗಳಲ್ಲಿ ಕತ್ತಿ, ಖಡ್ಗ,ತಲ್ವಾರ್ ಇವುಗಳಲ್ಲಿ ಯಾವುದಾದರೂ ಒಂದು ಇರಲೇಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


ಇವತ್ತಲ್ಲ ನಾಳೆ ಬೀದಿ ಕಾಳಗ ಆಗುತ್ತೆ. ಆಗ ನಾವು, ನಮ್ಮ ಸಮಾಜ ಎಲ್ಲವನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಡಿಜೆಹಳ್ಳಿ, ಕೆಜೆಹಳ್ಳಿ ಗಲಾಟೆ ನನೆಪು ಮಾಡಿಕೊಳ್ಳೋಣ. ಈ ರೀತಿ ದೇಶದಲ್ಲಿ ಆವರಿಸಿಕೊಂಡಿರುವ ಶತ್ರುಗಳನ್ನು ಗುರುತಿಸೋಣ, ತಡೆಯೋಣ ಎಂದು ಮುತಾಲಿಕ್ ತಿಳಿಸಿದ್ದಾರೆ.

error: Content is protected !!