ಪೆಟ್ರೋಲ್ ಬಂಕ್ನಲ್ಲಿ ಡಿಸೇಲ್ ಬರಲು ವಾಹನಕ್ಕೆ ನೀರು ತುಂಬಿದ ಘಟನೆ ಬೆಂಗಳೂರಿನ ಹೆಚ್.ಬಿ.ಆರ್ ಲೇಔಟ್ನ ಹೆಚ್.ಪಿ.ಬಂಕ್ನಲ್ಲಿ ನಡೆದಿದೆ.
ಬಂಕ್ ಸಿಬ್ಬಂದಿ ಡೀಸೆಲ್ ಬದಲು ನೀರು ತುಂಬಿ ಗ್ರಾಹಕರಿಗೆ ಯಾಮಾರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಂಕ್ ಸಿಬ್ಬಂದಿ ಲಾರಿಗೆ ಡೀಸೆಲ್ ಬದಲು ನೀರು ಹಾಕಿ ಲಾರಿ ಚಾಲಕನಿಗೆ ಯಾಮಾರಿಸಿದ್ದರು. ಅನುಮಾನಗೊಂಡ ಲಾರಿ ಚಾಲಕ ಬಕೆಟ್ಗೆ ಡಿಸೇಲ್ ತುಂಬಿ ಪರೀಕ್ಷಿಸಿದ ಸಂದರ್ಭದಲ್ಲಿ ತಾನು ಯಾಮಾರಿರುವುದು ಗೊತ್ತಾಗಿದ್ದು, ಕೂಡಲೇ ಚಾಲಕ ಸಿಬ್ಬಂದಿಗೆ ವಂಚನೆ ಬಗ್ಗೆ ಪ್ರಶ್ನಿಸಿದ್ದಾರೆ.
ಆದ್ರೆ ಸಿಬ್ಬಂದಿ ಇದೆಲ್ಲಾ ಕಾಮನ್ ಎಂದು ಉಡಾಫೆಯಾಗಿ ಉತ್ತರಿಸಿ, ಚಾಲಕನಿಗೆ ಧಮ್ಕಿ ಕೂಡ ಹಾಕಿದ್ದಾರಂತೆ.
ಗಾಡಿಗೆ ಹಾಕಿಸಿಕೊಂಡ ಡೀಸೆಲ್ನಲ್ಲಿ ಶೇಕಡಾ 90.ರಷ್ಟು ನೀರಿದ್ರೆ, ಡೀಸೆಲ್ ಸಿಗೋದು ಕೇವಲ 10% ಮಾತ್ರ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರೋ ವೇಳೆಯಲ್ಲಿ ಬಂಕ್ ನವರು ಹಗಲು ದರೋಡೆಗೆ ಇಳಿದಿದ್ದಾರೆ ಎಂದು ಚಾಲಕ ಆರೋಪ ಮಾಡಿದ್ದಾರೆ.
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ