ತೂಕಡಿಸಿ ತೂಕಡಿಸಿ ಓದುತಲಿದ್ದೆ
ಅಣ್ಣ ಸೂರಿ ತಾರಾ ತಾರಾ ಎನಲು
ಎಚ್ಚೆತ್ತು ಕೆಮ್ಮಿ ಕೆಮ್ಮಿ ತೊದಲಿದೆ
ಗದರಿ ಗದರಿ ವಿನಯದಿ ಅರುಹಿದ
ಗಮನದಿ ವಿಷಯವನು ಓದು ಓದು
ಕಲಿಯುತಿರು ಅದ ಬರೆದು ಬರೆದು
ಉಳಿವುದು ಸದಾ ನೆನಪು ನೆನಪು
ಎದುರಿಸು ಛಲದಿ ಪರೀಕ್ಷೆ ಪರೀಕ್ಷೆ
ಕದಿಯಲಾಗದು ಜ್ಞಾನದ ಸಂಪತ್ತು ಸಂಪತ್ತು
ತುಂಬಿಕೋ ಅದನು ಮನಕೆ ನೆನೆ ನೆನೆದು
ನಿನಗೆ ತರುವುದು ಸದಾ ಕೀರುತಿ ಕೀರುತಿ
ನಿರಂತರ ಎನಿಸುವೆ ನೀ ಸಜ್ಜನ ಸಜ್ಜನ
ಆಗುವೆ ನೀ ಸ್ವಾವಲಂಬಿ ಸ್ವಾವಲಂಬಿ
ಗಳಿಸುವೆ ಉನ್ನತ ಉನ್ನತ ಸ್ಥಾನಮಾನ
ನಡೆಸುವೆ ಹಂಗಿಲ್ಲದ ಜೀವನ ಜೀವನ
ಮಾಡುವೆ ಅಶಕ್ತರಿಗೆ ದಾನವ ದಾನವ
ಎಡವಿ ಎಡವಿ ಬೀಳುವ ಸಮಯದಿ
ಎಚ್ಚರಿಸಿ ಎಚ್ಚರಿಸಿ ತಿದ್ದಿ ತೀಡುವನೇ
ಸಜ್ಜನ ಗುರು ಗುರು ಆಚಾರ್ಯರು
ಅಣ್ಣನೇ ನನ್ನ ದಾರಿ ದೀವಿಗೆ ದೀವಿಗೆ
ಹೊಳೆಯುತಿರುವೆ ಇ೦ದು ಫಳ ಫಳ ಜಗದಿ
ಗಳಿಸುತಿರುವೆ ಝಣ ಝಣ ಕಾಂಚಾಣ
ನೀಡುತಿರುವೆ ಖುಷಿ ಖುಷಿಯಲಿ ದೇಣಿಗೆ
ಸ್ಮರಿಸಿ ಸ್ಮರಿಸಿ ಕೈಮುಗಿಯುವೆ ನನ್ನ ಸೂರಿಗೆ
ನನ್ನ ಗುರು ಸೂರ್ಯನಾರಾಯಣ ದಿವ್ಯಚೇತನಕ್ಕೆ ನಮೋ ನಮೋ 🙏
- ಮೈಸೂರು : ಇವಿಎಂ, ವಿವಿ ಪ್ಯಾಟ್ ಗಳಿಗೆ ಬಿಗಿ ಭದ್ರತೆ: ಸ್ಟ್ರಾಂಗ್ ರೂಂ ಪರಿಶೀಲಿಸಿದ ಡಿಸಿ ಡಾ ರಾಜೇಂದ್ರ
- ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರು ಬರಪರಿಹಾರ ಘೋಷಣೆ
- 14 ಕ್ಷೇತ್ರಗಳ ಪೈಕಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಮತದಾನ: ಮಂಡ್ಯದಲ್ಲಿ ಶೇ 81.67 ರಷ್ಟು. ಮತದಾನ
- ಮಂಡ್ಯ , ಬೆಂಗಳೂರು ಕ್ಷೇತ್ರದ 9 ಗಂಟೆ ತನಕದ ಮತದಾನದ ವಿವರ
- ಮೂವರು ಯುವಕರು ರೈಲಿಗೆ ಸಿಲುಕಿ ದುರ್ಮರಣ