ತೂಕಡಿಸಿ ತೂಕಡಿಸಿ ಓದುತಲಿದ್ದೆ
ಅಣ್ಣ ಸೂರಿ ತಾರಾ ತಾರಾ ಎನಲು
ಎಚ್ಚೆತ್ತು ಕೆಮ್ಮಿ ಕೆಮ್ಮಿ ತೊದಲಿದೆ
ಗದರಿ ಗದರಿ ವಿನಯದಿ ಅರುಹಿದ
ಗಮನದಿ ವಿಷಯವನು ಓದು ಓದು
ಕಲಿಯುತಿರು ಅದ ಬರೆದು ಬರೆದು
ಉಳಿವುದು ಸದಾ ನೆನಪು ನೆನಪು
ಎದುರಿಸು ಛಲದಿ ಪರೀಕ್ಷೆ ಪರೀಕ್ಷೆ
ಕದಿಯಲಾಗದು ಜ್ಞಾನದ ಸಂಪತ್ತು ಸಂಪತ್ತು
ತುಂಬಿಕೋ ಅದನು ಮನಕೆ ನೆನೆ ನೆನೆದು
ನಿನಗೆ ತರುವುದು ಸದಾ ಕೀರುತಿ ಕೀರುತಿ
ನಿರಂತರ ಎನಿಸುವೆ ನೀ ಸಜ್ಜನ ಸಜ್ಜನ
ಆಗುವೆ ನೀ ಸ್ವಾವಲಂಬಿ ಸ್ವಾವಲಂಬಿ
ಗಳಿಸುವೆ ಉನ್ನತ ಉನ್ನತ ಸ್ಥಾನಮಾನ
ನಡೆಸುವೆ ಹಂಗಿಲ್ಲದ ಜೀವನ ಜೀವನ
ಮಾಡುವೆ ಅಶಕ್ತರಿಗೆ ದಾನವ ದಾನವ
ಎಡವಿ ಎಡವಿ ಬೀಳುವ ಸಮಯದಿ
ಎಚ್ಚರಿಸಿ ಎಚ್ಚರಿಸಿ ತಿದ್ದಿ ತೀಡುವನೇ
ಸಜ್ಜನ ಗುರು ಗುರು ಆಚಾರ್ಯರು
ಅಣ್ಣನೇ ನನ್ನ ದಾರಿ ದೀವಿಗೆ ದೀವಿಗೆ
ಹೊಳೆಯುತಿರುವೆ ಇ೦ದು ಫಳ ಫಳ ಜಗದಿ
ಗಳಿಸುತಿರುವೆ ಝಣ ಝಣ ಕಾಂಚಾಣ
ನೀಡುತಿರುವೆ ಖುಷಿ ಖುಷಿಯಲಿ ದೇಣಿಗೆ
ಸ್ಮರಿಸಿ ಸ್ಮರಿಸಿ ಕೈಮುಗಿಯುವೆ ನನ್ನ ಸೂರಿಗೆ
ನನ್ನ ಗುರು ಸೂರ್ಯನಾರಾಯಣ ದಿವ್ಯಚೇತನಕ್ಕೆ ನಮೋ ನಮೋ 🙏

ನಿವೃತ್ತ ಪ್ರಾಂಶುಪಾಲರು ಬೆಂಗಳೂರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)