January 28, 2026

Newsnap Kannada

The World at your finger tips!

chitra 1

ಚಿತ್ರದುರ್ಗದ ಮಾದಾರ ಚೆನ್ನಯ್ಯ ಶ್ರೀಗಳಿಗೆ ಕೋವಿಡ್‌ ಸೋಂಕು ಧೃಡ

Spread the love

ಒಳಮೀಸಲಿನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ‌ ಹಿನ್ನಲೆಯಲ್ಲಿ ರಾಜ್ಯದ ಹಲವು ಮುಖಂಡರೊಡನೆ ಚರ್ಚೆ ನಡೆಸಲು ಪ್ರವಾಸಕ್ಕೆ ತೆರಳಿದ್ದ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳಿಗೆ ಕರೋನಾ ಸೋಂಕು ಧೃಡವಾಗಿದೆ.

ಈ ಕುರಿತು ಮಾತನಾಡಿರುವ ಶ್ರಿಜ ಶಿವಶರಣ ಮಾದಾರ ಚೆನ್ನಯ್ಯ ಟ್ರಸ್ಟ್ ನ ಕೋಶಾಧ್ಯಕ್ಷ ಬಿ.ಎನ್‌‌. ಚಂದ್ರಪ್ಪ ‘ಶ್ರೀಗಳಿಗೆ ಸೋಂಕು ಧೃಡವಾದ ಕಾರಣ ಅವರು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಆಸ್ಪತ್ರೆಯಿಂದ ವಾಪಾಸಾದ ನಂತರ ಒಳಮೀಸಲು ತೀರ್ಪಿನ ಬಗ್ಗೆ ಚರ್ಚೆ ಮುಂದುವರಿಸಲು ಮತ್ತೆ ಪ್ರವಾಸ ಕೈಗೊಳ್ಳಲಿದ್ದಾರೆ. ಇನ್ನು ೪-೫ ದಿನಗಳಲ್ಲಿ ಶ್ರೀಗಳು ಗುರುಪೀಠಕ್ಕೆ ಆಗಮಿಸಲಿದ್ದಾರೆ ಭಕ್ತವೃಂದವು ಆತಂಕ ಪಡಬಾರದು’ ಎಂದು ಹೇಳಿದ್ದಾರೆ.

error: Content is protected !!