ಚಿತ್ರದುರ್ಗದ ಮಾದಾರ ಚೆನ್ನಯ್ಯ ಶ್ರೀಗಳಿಗೆ ಕೋವಿಡ್‌ ಸೋಂಕು ಧೃಡ

Team Newsnap
1 Min Read

ಒಳಮೀಸಲಿನ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ‌ ಹಿನ್ನಲೆಯಲ್ಲಿ ರಾಜ್ಯದ ಹಲವು ಮುಖಂಡರೊಡನೆ ಚರ್ಚೆ ನಡೆಸಲು ಪ್ರವಾಸಕ್ಕೆ ತೆರಳಿದ್ದ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳಿಗೆ ಕರೋನಾ ಸೋಂಕು ಧೃಡವಾಗಿದೆ.

ಈ ಕುರಿತು ಮಾತನಾಡಿರುವ ಶ್ರಿಜ ಶಿವಶರಣ ಮಾದಾರ ಚೆನ್ನಯ್ಯ ಟ್ರಸ್ಟ್ ನ ಕೋಶಾಧ್ಯಕ್ಷ ಬಿ.ಎನ್‌‌. ಚಂದ್ರಪ್ಪ ‘ಶ್ರೀಗಳಿಗೆ ಸೋಂಕು ಧೃಡವಾದ ಕಾರಣ ಅವರು ಬೆಂಗಳೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌.

ಆಸ್ಪತ್ರೆಯಿಂದ ವಾಪಾಸಾದ ನಂತರ ಒಳಮೀಸಲು ತೀರ್ಪಿನ ಬಗ್ಗೆ ಚರ್ಚೆ ಮುಂದುವರಿಸಲು ಮತ್ತೆ ಪ್ರವಾಸ ಕೈಗೊಳ್ಳಲಿದ್ದಾರೆ. ಇನ್ನು ೪-೫ ದಿನಗಳಲ್ಲಿ ಶ್ರೀಗಳು ಗುರುಪೀಠಕ್ಕೆ ಆಗಮಿಸಲಿದ್ದಾರೆ ಭಕ್ತವೃಂದವು ಆತಂಕ ಪಡಬಾರದು’ ಎಂದು ಹೇಳಿದ್ದಾರೆ.

Share This Article
Leave a comment