ಬೊಮ್ಮಾಯಿ ಕ್ಯಾಬಿನೆಟ್ ರಚನೆ ಕೊನೆಗೂ ಒಂದು ಹಂತಕ್ಕೆ ಬಂದಿದೆ. ಸಧ್ಯಕ್ಕೆ ಐವರು ಶಾಸಕರಿಗೆ ಮಾತ್ರ ದೂರವಾಣಿ ಮೂಲಕ ಮಾಹಿತಿ ಹೇಳಲಾಗಿದೆ. ಆ ಶಾಸಕರಿಗೆ ಮಂತ್ರಿ ಭಾಗ್ಯ ಸಿಕ್ಕಿದೆ. ಉಳಿದ 20 ಮಂದಿ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಗೌಪ್ಯವಾಗಿದೆ.
ಶಾಸಕ ಶಂಕರ್ ಪಾಟೀಲ್ ಮುನೇಕೊಪ್ಪ, ಈಶ್ವರಪ್ಪ, ಡಾ ಸುಧಾಕರ್ , ಬಿ ಸಿ ಪಾಟೀಲ್, ಮುರುಗೇಶ್ ನಿರಾಣಿ ಅವರುಗಳಿಗೆ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಫೋನ್ ಮಾಡಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ದರಾಗಿ ಎಂದು ಹೇಳಿದ್ದಾರೆ.
ಸಚಿವರ ಪಟ್ಟಿಗೆ ಅಂಕಿತ ಪಡೆಯಲು ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಪ್ರದಕ್ಷಿಣೆ ಹಾಕುತ್ತಿದ್ದ ಬೊಮ್ಮಾಯಿ ಇಂದು ಬೆಳಗ್ಗೆ 9:00 ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಸದ್ಯ, ಮಂತ್ರಿಗಿರಿ ಪಟ್ಟಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮುದ್ರೆ ಬಿದ್ದಿದೆ ಎನ್ನಲಾಗಿದೆ.
ಮಧ್ಯಾಹ್ನ 2:15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ,
ಬಸವರಾಜ್ ಬೊಮ್ಮಾಯಿ ಸಿಎಂ ಆದ ಕ್ಷಣದಿಂದಲೇ ನಡೆಯುತ್ತಿದ್ದ ಕ್ಯಾಬಿನೆಟ್ ರಚನೆ ಸರ್ಕಸ್ಗೆ ಕೊನೆಗೂ ಇವತ್ತು ಕ್ಲೈಮ್ಯಾಕ್ಸ್ ನಿಗದಿಯಾಗಿದೆ.