February 22, 2026

Newsnap Kannada

The World at your finger tips!

cd latter

ರಕ್ಷಣೆ ಕೋರಿ ಹೈಕೋರ್ಟ್​ನ ಮುಖ್ಯನ್ಯಾಯಮೂರ್ತಿಗೆ ಸಿಡಿ ಲೇಡಿ ಪತ್ರ

Spread the love

ಮಾಜಿ ಸಚಿವರ ವಿರುದ್ಧದ ಸಿ.ಡಿ ಸ್ಫೋಟ ಪ್ರಕರಣದ ಸಂತ್ರಸ್ತ ಯುವತಿ ಹೈಕೋರ್ಟ್​ ಮುಖ್ಯನ್ಯಾಯಮೂರ್ತಿ ಗಳಿಗೆ ಇ ಮೇಲ್ ಮೂಲಕ ಪತ್ರ ಬರೆದಿದ್ದಾಳೆ.

ಈ ಪತ್ರದ ಸ್ಕ್ರೀನ್ ಶಾಟ್ ವೈರಲ್ ಆಗಿದೆ ಆಗುತ್ತಿದೆ. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್​ಐಟಿ ತನಿಖೆಯಾಗಬೇಕು ಎಂದು ಯುವತಿ ನ್ಯಾಯಮೂರ್ತಿಗಳನ್ನು ಕೋರಿದ್ದಾರೆ

ಜೊತೆಗೆ ತನಗೆ ಜೀವಬೆದರಿಕೆ ಇದ್ದು, ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.ನನ್ನ ತಂದೆ ತಾಯಿಯಿಂದ ಬಲವಂತವಾಗಿ ಹೇಳಿಕೆ ಕೊಡಿಸಿಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿ. ಸಾರ್ವಜನಿಕವಾಗಿ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಪೋಷಕರಿಗೆ ಎಸ್​ಐಟಿ ರಕ್ಷಣೆ ಕೊಟ್ಟಿಲ್ಲ. ರಮೇಶ್​ ಜಾರಕಿಹೊಳಿಯಿಂದ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ಎಸ್​ಐಟಿ ರಮೇಶ್​ ಜಾರಕಿಹೊಳಿ ಜೊತೆ ಕೈಜೋಡಿಸಿದ್ದಾರೆ ಎಂದು ಪತ್ರದಲ್ಲಿ ಯುವತಿ ಪತ್ರದಲ್ಲಿ ಹೇಳಿದ್ದಾಳೆ.

ಜಾರಕಿಹೊಳಿ ಆರೋಪ ಮುಕ್ತನಾಗಲು ಏನು ಮಾಡಲು ಸಿದ್ಧ ಅಂತ  ಬೆದರಿಕೆ ಹಾಕಿದ್ದಾರೆ. ರಮೇಶ್​ ಜಾರಿಹೊಳಿಗೆ ಕ್ರಿಮಿನಲ್​ ಹಿನ್ನೆಲೆ ಇದೆ. ತನ್ನ ವಿರುದ್ಧ ಹೇಳಿಕೆ ನೀಡದಂತೆ ನನಗೆ, ಪೋಷಕರಿಗೆ ಒತ್ತಡ ಹಾಕಿದ್ದಾರೆ. ಈಗಾಗಲೇ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

error: Content is protected !!