February 22, 2026

Newsnap Kannada

The World at your finger tips!

girl 1 1

ಡಿ.ಕೆ.ಶಿ ದುಡ್ಡು ಕೊಟ್ಟು ನನ್ನ ಅಕ್ಕನನ್ನು ಗೋವಾಗೆ ಕಳಿಸ್ತಾರಂತೆ- ಸಂತ್ರಸ್ತೆಯ ಸಹೋದರ ಆರೋಪ

Spread the love

ಡಿ.ಕೆ. ಶಿವಕುಮಾರ್ ದುಡ್ಡುಕೊಟ್ಟು ಗೋವಾಗೆ ಕಳಿಸುತ್ತಾರೆಂದು ನಮ್ಮ ಅಕ್ಕ ಹೇಳಿದ್ದಳು ಎಂದು ಸಂತ್ರಸ್ತೆಯ ಸಹೋದರ ಹೇಳಿಕೆ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ಎದುರು ಶನಿವಾರ ಸಂತ್ರಸ್ತೆಯ ಕುಟುಂಬಸ್ತರು ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೋಷಕರು ಹಾಗೂ ಸಹೋದರರು ಡಿಕೆಶಿಯ ಷಡ್ಯಂತ್ರ ಬಾಯಿ ಬಿಟ್ಟು ಹೇಳಿದರು.

ನಮ್ಮ ಅಕ್ಕನನ್ನ ಇಟ್ಟುಕೊಂಡು ಹೀಗೆ ರಾಜಕೀಯ ಮಾಡ್ತಿದ್ದಾರೆ. ಘಟನೆ ನಡೆದ ದಿನ ಡಿ.ಕೆ. ಶಿವಕುಮಾರ್ ಮನೆಗೆ ಹೋಗಿದ್ದಳು. ಅವರು ದುಡ್ಡುಕೊಟ್ಟು ನಮ್ಮ ಅಕ್ಕನನ್ನು ಗೋವಾಗೆ ಕಳುಹಿಸಿದ್ದಾರೆ. ನಮಗೆ ನಮ್ಮ ಅಕ್ಕ ಬೇಕು ಎಂದು ಸಂತ್ರಸ್ತೆಯ ಸಹೋದರ ಹೇಳಿದ್ದಾರೆ.

ದೇಶ ಕಾದೆ, ಮಗಳನ್ನು ಕಾಯಲು ಆಗಲ್ವಾ?

ನಾನು ಮಾಜಿ ಸೈನಿಕ, ದೇಶ ಕಾಯ್ದವನು. ನನ್ನ ಮಗಳನ್ನು ಕಾಯಲು ಆಗಲ್ವಾ..? ಅಂತಾ ಸಿಡಿ ಪ್ರಕರಣದ ಯುವತಿಯ ತಂದೆ ಪ್ರಶ್ನೆ ಮಾಡಿದ್ದಾರೆ.

ಸಂತ್ರಸ್ತೆಯ ತಂದೆ ನಾನು. ಮಾಜಿ ಸೈನಿಕ, ದೇಶ ಕಾಯ್ದವನು ನನ್ನ ಮಗಳನ್ನ ಕಾಯಲು ಆಗಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಿನ್ನೆಲ್ಲಾ ಜವಾಬ್ದಾರಿಗಳನ್ನ ನಾವು ನೋಡಿಕೊಳ್ಳುತ್ತೇವೆ. ದಯಮಾಡಿ ನಮ್ಮ ಬಳಿ ಬಾ ಎಂದು ಮಗಳಿಗೆ ಪೋಷಕರು ಕರೆ ನೀಡಿದರು.

error: Content is protected !!