February 20, 2026

Newsnap Kannada

The World at your finger tips!

kenara

10 ರು. ಕೆಳಗೆ ಬೀಳಿಸಿ, ಮಂಡ್ಯ ಕಾಳಿಕಾಂಬ ದೇವಸ್ಥಾನ ಹುಂಡಿ‌ ಹಣ ಎಗರಿಸಿದ ಖದೀಮರು

Spread the love

ಬ್ಯಾಂಕಿಗೆ ಕಟ್ಟಲು ತಂದಿದ್ದ ಹುಂಡಿ ಹಣವನ್ನು ಖದೀಮರು ಲಪಟಾಯಿಸಿದ ಘಟನೆ ಮಂಡ್ಯ ನಗರದ ಗಾಂಧಿಭವನದ ಬಳಿಯ ಕೆನರಾ ಬ್ಯಾಂಕ್ ನಲ್ಲಿ ಬುಧವಾರ ಜರುಗಿದೆ.

ಮಂಡ್ಯ ನಗರದ ಗ್ರಾಮದೇವತೆ ಕಾಳಿಕಾಂಬ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿದ್ದ 1.80 ಲಕ್ಷ ರೂ ಹಣ ಅಪಹರಿಸಲಾಗಿದೆ.

ಬ್ಯಾಂಕ್ ಗೆ ಬಂದಿದ್ದ ವೇಳೆ ಬ್ಯಾಂಕ್ ನಲ್ಲಿ‌ ಕುಳಿತಿದ್ದ ಮೂವರಿಂದ ಕೃತ್ಯ‌ ಜರುಗಿದೆ.

10 ರೂ ನೋಟು ಕೆಳ ಬೀಳಿಸಿ ಗಮನ ಬೇರೆಡೆ ಸೆಳೆದು ಹಣದ ಬ್ಯಾಗ್ ಅಪಹರಿಲಾಗಿದೆ.

ಹಣ ಕಳೆದುಕೊಂಡ ದೇವಾಲಯದ ಸಿಬ್ಬಂದಿ ಪಶ್ಚಿಮ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

error: Content is protected !!