ತುಮಕೂರಿನ ಕಳ್ಳಂಬೆಳ್ಳ ಬಳಿ ಲಾರಿ – ಕ್ರೂಸರ್ ಭೀಕರ ಡಿಕ್ಕಿ 9 ಮಂದಿ ಸಾವು

Team Newsnap
1 Min Read

ಲಾರಿ – ಕ್ರೂಸರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 12 ಮಂದಿ ಗಾಯಗೊಂಡ ಘಟನೆ ತುಮಕೂರಿನ ಕಳ್ಳಂಬೆಳ್ಳದ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ಸಂಭವಿಸಿದೆ.

ಬೆಂಗಳೂರಿನಿಂದ ರಾಯಚೂರಿನತ್ತ ಹೊರಟಿದ್ದ ಕ್ರೂಸರ್ ಗೆ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದು ಈ ದುರಂತ ಇಂದು ಬೆಳಗಿನ ಜಾವ 4.30 ರ ವೇಳೆಗೆ ಸಂಭವಿಸಿದೆ.

thumkuru acci

ಈ ದುರಂತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಗಾಯಗೊಂಡ 12 ಮಂದಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸತ್ತವರೆಲ್ಲಾ ರಾಯಚೂರು ಜಿಲ್ಲೆಯ ಜನರು ಎಂದು ಗೊತ್ತಾಗಿದೆ.

ಈ ಕ್ರೂಸರ್ ನಲ್ಲಿ 20 ಮಂದಿ ಪ್ರಯಾಣ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಕಳ್ಳಂಬೆಳ್ಳ ಹಾಗೂ ಶಿರಾ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Share This Article
Leave a comment