ಕಳೆದ 32 ವರ್ಷಗಳಿಂದ ಹರಿಯಾಣದ ರಾಖಿ ಗರ್ಹಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ)ಯು 5 ಸಾವಿರ ವರ್ಷಗಳ ಹಳೆಯ ಆಭರಣ ತಯಾರಿಕೆ ಕಾರ್ಖಾನೆಯನ್ನು ಪತ್ತೆ ಹಚ್ಚಿದೆ. ಇದು ಎಎಸ್ಐಯ ಅತೀ ದೊಡ್ಡ ಆವಿಷ್ಕಾರಗಳಲ್ಲಿ ಒಂದಾಗಿದೆ.
ರಾಖಿ ಗರ್ಹಿ ಒಂದು ಹಳ್ಳಿ ಮತ್ತು ಹರಿಯಾಣದ ಹಿಸಾರ್ ಜಿಲ್ಲೆಯ ಸಿಂಧೂ ಕಣಿವೆ ನಾಗರಿಕತೆಗೆ ಸೇರಿದ ಅತ್ಯಂತ ಹಳೆಯ ಪುರಾತನ ಸ್ಥಳಗಳಲ್ಲಿ ಒಂದಾಗಿದೆ.
5 ಸಾವಿರ ವರ್ಷಗಳ ಹಳೆಯ ಆಭರಣ ತಯಾರಿಕೆ ಕಾರ್ಖಾನೆಯಲ್ಲಿ ಕೆಲವು ಮನೆಗಳ ರಚನೆ ಹಾಗೂ ಅಡುಗೆ ಮನೆಗಳು, ಜೊತೆಗೆ ಸಾವಿರಾರು ವರ್ಷಗಳಿಂದ ಬಚ್ಚಿಡಲಾದ ತಾಮ್ರ, ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಲಾಗಿದೆ.
ಈ ಕುರಿತಂತೆ ಮಾತನಾಡಿರುವ ಎಎಸ್ಐ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಡಾ.ಸಂಜಯ್ ಅವರು, ಕಳೆದ 20 ವರ್ಷಗಳಲ್ಲಿ ನಾವು ಸಿನೌಲಿ, ಹಸ್ತಿನಾಪುರ ಮತ್ತು ರಾಖಿಗರ್ಹಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ರಾಖಿಗರ್ಹಿಯ ಜನರು ಹಸ್ತಿನಾಪುರದ ಪೂರ್ವಜರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ಮತ್ತು ಇದರಿಂದ ಸಂಸ್ಕೃತಿಯು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದೆ ಅಂತ ಹೇಳಬಹುದು ಎಂದಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ)ಯು ರಾಖಿ ಗರ್ಹಿಯಲ್ಲಿ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದೆ, ಈ ನಾಗರಿಕತೆಯು ಅಭಿವೃದ್ಧಿಯತ್ತ ಸ್ಥಿರವಾಗಿ ಮುನ್ನಡೆಯುತ್ತಿರುವುದನ್ನು ಸೂಚಿಸುತ್ತದೆ.
ಈ ಮುನ್ನ 2018 ರಲ್ಲಿ ಉತ್ತರ ಪ್ರದೇಶದ ಸಿನೌಲಿಯಲ್ಲಿ ಪತ್ತೆಯಾಗಿದ್ದ ಕಂಚಿನ ಯುಗದ ದೊಡ್ಡ ಡಿಸ್ಕ್ (ಚಕ್ರದ ಬಂಡಿ)ಗಳು ಎಲ್ಲರ ಗಮನಸೆಳೆದಿತ್ತು. ಇದನ್ನು ಕೆಲವರು ಕುದುರೆ ರಥಗಳು ಎಂದು ತಿಳಿಸಿದ್ದರು. ಅದೇ ಉತ್ಖನನದ ಸ್ಥಳಗಳಲ್ಲಿ ಸ್ಮಶಾನಗಳೂ ಕಂಡುಬಂದಿತ್ತು, ಆಗಿನ ಜನರು ಮರಣದ ಬಳಿಕ ಜೀವನದ ಬಗ್ಗೆ ನಂಬಿಕೆ ಇಟ್ಟಿದ್ದರು ಎಂದು ತಿಳಿಯಲಾಗಿದೆ.
ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More
ಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬಳಿಕ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣರನ್ನು ಅಮಾನತು ಮಾಡಿ ಜೆಡಿಎಸ್… Read More
ಬೆಂಗಳೂರು : ರಾಜ್ಯದ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗೆ ನಾಳೆಯಿಂದ 3 ದಿನಗಳ… Read More
ಬೆಂಗಳೂರು : ಮೇ 10ರಂದು - ಪ್ರಸಕ್ತ ಸಾಲಿನ SSLC ಪರೀಕ್ಷೆಯ ಫಲಿತಾಂಶ ಪ್ರಕಟಿಸಲು ಇಲಾಖೆ ಎಲ್ಲಾ ರೀತಿಯ ಸಿದ್ದತೆಗಳನ್ನು… Read More
ನವದೆಹಲಿ ,ಏಪ್ರಿಲ್ 30 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ದಾಖಲಾಗಿದೆ. 24… Read More
ರಾಮನಗರ : ಮೇಕೆದಾಟು (Mekedatu) ಬಳಿಯ ಸಂಗಮದ ಕಾವೇರಿ ನದಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ… Read More
This website uses cookies.
Leave a Comment