ಕೆಂಗೇರಿಯಲ್ಲಿ ಲಿಫ್ಟ್​ನ​​ ಹೊಂಡಕ್ಕೆ ಬಿದ್ದ 2 ವರ್ಷದ ಮಗು ಸಾವು

Team Newsnap
2 Min Read

ಕೆಂಗೇರಿಯಲ್ಲಿ ಲಿಫ್ಟ್​ನ​​ ಹೊಂಡಕ್ಕೆ ಬಿದ್ದ 2 ವರ್ಷದ ಮಗು ಸಾವು

ಬೆಂಗಳೂರಿನಲ್ಲಿ ಪೋಷಕರು ಕೊಂಚ ಮೈಮರೆತಿದ್ದಕ್ಕೆ 2 ವರ್ಷದ ಮಗುವೊಂದು ಜೀವ ಕಳೆದುಕೊಂಡಿದೆ.

ಬೆಂಗಳೂರಿನ ಕೆಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದು ಎರಡು ವರ್ಷದ ಮಗು‌ ಸಾವನ್ನಪ್ಪಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದ 2 ವರ್ಷದ ಮಗು ವಿನೋದ್​ ತೀವ್ರವಾಗಿ‌ ಗಾಯಗೊಂಡಿತ್ತು. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ‌ ಮಗು ಸಾವನ್ನಪ್ಪಿದೆ.

ಕೊಪ್ಪಳ ಮೂಲದವರಾದ ಪೋಷಕರು ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲೇ ಶೆಡ್​ನಲ್ಲಿ ವಾಸವಾಗಿದ್ದರು. ಮಗುವಿನ ತಂದೆ ಬಿಜಿಎಸ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು.

ಕಟ್ಟಡಕ್ಕೆ ಲಿಫ್ಟ್​ ಅಳವಡಿಸಲು 6 ಅಡಿ ಹೊಂಡ ತೋಡಲಾಗಿತ್ತು. ಆ ಗುಂಡಿಯಲ್ಲಿ ಮಳೆಯಿಂದ ನೀರು ತುಂಬಿಕೊಂಡಿತ್ತು. ಆ ಗುಂಡಿಗೆ ಅಡ್ಡಲಾಗಿ ಏನೂ ಇಟ್ಟಿರಲಿಲ್ಲ. ಅದರ ಸುತ್ತಲೂ ಆಟವಾಡುವ ಸಮಯದಲ್ಲಿ 2 ವರ್ಷದ ಮಗು ವಿನೋದ್​ ಕುಮಾರ್ ಗುಂಡಿಗೆ ಬಿದ್ದಿದ್ದ. ವಿಷಯ ಗೊತ್ತಾದ ಕೂಡಲೆ ಮಗುವಿನ ಪೋಷಕರು ಮಗುವನ್ನು ಎತ್ತಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ನೀರಿನಲ್ಲಿ ಮುಳುಗಿದ್ದರಿಂದ ಮಗುವಿನ ಜೀವ ಹೋಗಿತ್ತು. ಕಟ್ಟಡ ನಿರ್ಮಿಸುತ್ತಿದ್ದ ರಮೇಶ್ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರಿನ ಕೆಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದು ಎರಡು ವರ್ಷದ ಮಗು‌ ಸಾವನ್ನಪ್ಪಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್​ನ ಗುಂಡಿಗೆ ಬಿದ್ದ 2 ವರ್ಷದ ಮಗು ವಿನೋದ್​ ತೀವ್ರವಾಗಿ‌ ಗಾಯಗೊಂಡಿತ್ತು. ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ‌ ಮಗು ಸಾವನ್ನಪ್ಪಿದೆ.

ಕೊಪ್ಪಳ ಮೂಲದವರಾದ ಪೋಷಕರು ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲೇ ಶೆಡ್​ನಲ್ಲಿ ವಾಸವಾಗಿದ್ದರು. ಮಗುವಿನ ತಂದೆ ಬಿಜಿಎಸ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು.

ಕಟ್ಟಡಕ್ಕೆ ಲಿಫ್ಟ್​ ಅಳವಡಿಸಲು 6 ಅಡಿ ಹೊಂಡ ತೋಡಲಾಗಿತ್ತು. ಆ ಗುಂಡಿಯಲ್ಲಿ ಮಳೆಯಿಂದ ನೀರು ತುಂಬಿಕೊಂಡಿತ್ತು. ಆ ಗುಂಡಿಗೆ ಅಡ್ಡಲಾಗಿ ಏನೂ ಇಟ್ಟಿರಲಿಲ್ಲ. ಅದರ ಸುತ್ತಲೂ ಆಟವಾಡುವ ಸಮಯದಲ್ಲಿ 2 ವರ್ಷದ ಮಗು ವಿನೋದ್​ ಕುಮಾರ್ ಗುಂಡಿಗೆ ಬಿದ್ದಿದ್ದ. ವಿಷಯ ಗೊತ್ತಾದ ಕೂಡಲೆ ಮಗುವಿನ ಪೋಷಕರು ಮಗುವನ್ನು ಎತ್ತಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ನೀರಿನಲ್ಲಿ ಮುಳುಗಿದ್ದರಿಂದ ಮಗುವಿನ ಜೀವ ಹೋಗಿತ್ತು. ಕಟ್ಟಡ ನಿರ್ಮಿಸುತ್ತಿದ್ದ ರಮೇಶ್ ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಾಗಿದೆ.

Share This Article
Leave a comment