ರಾಜ್ಯದಲ್ಲಿ ಮೂರು ತಿಂಗಳ ಕಾಲ ಶೇ 10 ರಷ್ಟು ನೊಂದಣಿ ಶುಲ್ಕ ಕಡಿತ – ಆರ್ ಅಶೋಕ್

Team Newsnap
0 Min Read
Mandya District Minister R. Ashok is out of responsibility ಮಂಡ್ಯ ಜಿಲ್ಲಾಮಂತ್ರಿ ಜವಾಬ್ದಾರಿಯಿಂದ ಸಚಿವ ಆರ್ . ಅಶೋಕ್ ಔಟ್

ರಾಜ್ಯದಲ್ಲಿರೆವಿನ್ಯೂ, ಸೈಟ್, 
ಫ್ಲಾಟ್  ನ ನೊಂದಣಿ ಶುಲ್ಕವನ್ನು ಶೇ 10 ರಷ್ಟು ಕಡಿಮೆ ಮಾಡುವುದಾಗಿ ಕಂದಾಯ ಸಚಿವ ಆರ್​. ಅಶೋಕ್​ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ರಾಜ್ಯದ ಜನತೆಗೆ ಹೊಸ ವರ್ಷದ ಗಿಫ್ಟ್ ಕೊಡಲು ನಾವು ತೀರ್ಮಾನ ಮಾಡಿದ್ದೇವೆ ಆಸ್ತಿ ವಹಿವಾಟಿನಲ್ಲಿನ ಗೈಡೆನ್ಸ್ ವ್ಯಾಲ್ಯೂವನ್ನು ಹತ್ತು ಪರ್ಸೆಂಟ್ ಕಡಿತಗೊಳಿಸಿದ್ದೇವೆ ಎಂದಿದ್ದಾರೆ.

ಈ ಅವಕಾಶ ಕೇವಲ ಮೂರು ತಿಂಗಳು ಇರಲಿದೆ, ಇಂದಿನಿಂದ ಜಾರಿಯಾಗಿ  31.03.2022 ರವರೆಗೆ ಜಾರಿ ಇರುತ್ತದೆ ಎಂದಿದ್ದಾರೆ.

ಕೊರೊನಾ ಸೇರಿದಂತೆ ಸಾಕಷ್ಟು ತೊಂದರೆಯಲ್ಲಿ ಸಿಲುಕಿರುವವರಿಗೆ ಇದು ಸಹಕಾರಿಯಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

Share This Article
Leave a comment