ಹತ್ರಾಸ್ ಪ್ರಕರಣದ ವರದಿಗೆ 10 ದಿನ ಕಾಲಾವಕಾಶ ವಿಸ್ತರಣೆ

Team Newsnap
0 Min Read

ದೇಶದಾದ್ಯಂತ ಹತ್ರಾಸ್ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವರದಿ‌ ನೀಡುವಿಕೆಗೆ ಉತ್ತರ ಪ್ರದೇಶದ ಸರ್ಕಾರ 10 ದಿನಗಳ ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ.

ಹತ್ರಾಸ್ ಯುವತಿಯ‌ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಇಡೀ‌‌ ದೇಶವನ್ನೇ ದಂಗುಬಡಿಸಿತ್ತು. ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಎಲ್ಲೆಡೆ ಕೂಗು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ‌ ಯುಪಿ ಮುಖ್ಯಮಂತ್ರಿ ಯೋಗಿ‌ ಆದಿತ್ಯನಾಥ ಅವರು ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿ 7 ದಿನಗಳೊಳಗೆ ವರದಿ‌ ನೀಡುವಂತೆ ಆದೇಶಿಸಿತ್ತು.

ಆದರೆ ಈಗ ವರದಿ‌ ನೀಡುವಿಕೆಯ 10 ದಿನಗಳವರೆಗೆ ಸಮಯವನ್ನು ವಿಸ್ತರಿಸಿದ್ದು ಸಮಗ್ರ ವರದಿಗೆ ಆದೇಶ ನೀಡಿದೆ.

Share This Article
Leave a comment