ಫೈಲ್​ ವರ್ಗಾವಣೆಗೆ 1 ಲಕ್ಷ ರು ಲಂಚಕ್ಕೆ ಬೇಡಿಕೆ : ಕುಶಾಲನಗರ ಶಿರಸ್ತೆದಾರ್​ ಎಸಿಬಿ ಬಲೆಗೆ

Team Newsnap
0 Min Read

ಫೈಲ್​ ವರ್ಗಾವಣೆಗೆ 1ಲಕ್ಷ ರು ಲಂಚಕ್ಕೆ ಬೇಡಿಕೆಯಿಟ್ಟಿದ್ದ ತಾಲೂಕು ಕಚೇರಿಯ ಶಿರಸ್ತೆದಾರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕುಶಾಲನಗರ ತಾಲೂಕು ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು ಶಿರಸ್ತೆದಾರ್ ವಿನೋದ್ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಅಂದಗೋವೆ ಗ್ರಾಮದ ಬೆಳ್ಳಿಯಪ್ಪ ಅವರಿಗೆ ಶಿರಸ್ತೆದಾರ್ ವಿನೋದ್ ಫೈಲ್​ ವರ್ಗಾವಣೆಗಾಗಿ 1 ಲಕ್ಷ ರುಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ವಿಷಯವನ್ನು ಬೆಳ್ಳಿಯಪ್ಪ ಎಸಿಬಿಗೆ ತಿಳಿಸಿದ್ದಾರೆ. ಆ ಪೈಕಿ 50 ಸಾವಿರ ರೂಪಾಯಿ ಹಣವನ್ನು ಕಚೇರಿ ಬಳಿಯ ಕ್ಯಾಂಟಿನ್​ನಲ್ಲಿ ಸ್ವೀಕಾರ ಮಾಡುವಾಗ ದಾಳಿ ನಡೆಸಿದ ಅಧಿಕಾರಿಗಳ ತಂಡ ಶಿರಸ್ತೆದಾರರನ್ನು ಹಣದ ಸಮೇತ ಬಂಧಿಸಿದ್ದಾರೆ.

Share This Article
Leave a comment