ರವಿ ಕೃಷ್ಣಾ ರೆಡ್ಡಿ ಗೆ ಅಪಘಾತ ಪ್ರಾಣಪಾಯದಿಂದ ಪಾರು

Team Newsnap
0 Min Read

ಕೆಆರ್‌ಎಸ್‌ ಪಕ್ಷದ ವತಿಯಿಂದ ಕರ್ನಾಟಕ ಸೈಕಲ್‌ ಯಾತ್ರೆ ಆರಂಭವಾಗಿದೆ. ಸೈಕಲ್‌ ಯಾತ್ರೆಯ ನೇತೃತ್ವ ವಹಿಸಿದ್ದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಚಲಾಯಿಸುತ್ತಿದ್ದ ಸೈಕಲ್‌ಗೆ ಟೆಂಪೊವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಅಪಘಾತ ಕುರಿತು ಸ್ವತಃ ರೆಡ್ಡಿಯವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ರೆಡ್ಡಿಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಕೆಲವು ವಾರಗಳ ವಿಶ್ರಾಂತಿ ಅಗತ್ಯವಿದೆ. ಇನ್ನಷ್ಟು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

Share This Article
Leave a comment