ನ್ಯೂಸ್ನ್ಯಾಪ್
ಬೆಂಗಳೂರು
ಕನ್ನಡ ಚಿತ್ರರಂಗದಲ್ಕಿನ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ತೀವ್ರ ವಿಚಾರಣೆಗೊಳಪಡಿಸಿದ ನಂತರ ತಮ್ಮ ಹಾಗೂ ವೀರೇನ್ ನಡುವೆ ಸ್ನೇಹವಿತ್ತೆಂದು ಒಪ್ಪಿಗೆ ನೀಡಿದ್ದಾರೆ.
ಸಿಸಿಬಿ ಅಧಿಕಾರಿಗಳಾದ ಶ್ರೀಧರ್ ಪೂಜಾರ್ ಮತ್ತು ಮಹ್ಮದ್ ಸಿರಾಜ್ ನೇತೃತ್ವದ ತಂಡ ಮಡಿವಾಳದ ಸಾಂತ್ವನ ಕೇಂದ್ರ ಭಾನುವಾರವಿಡೀ ನಟಿಯರನ್ನು ವಿಚಾರಣೆಗೊಳಪಡಿಸಿತ್ತು.
ತನಿಖೆಯ ಪ್ರಾರಂಭದಲ್ಲಿ ತಮಗೂ ದೆಹಲಿ ಮೂಲದ ಪೇಜ್ 3 ಪಾರ್ಟಿಗಳ ಆಯೋಜಕ ಕಿಂಗ್ ಪಿನ್ ವೀರೇನ್ ಖನ್ನಾಗೂ ಯಾವುದೇ ಸಂಬಂಧ ಇಲ್ಲ ಎಂದೇ ವಾದಿಸಿದರು.
ಆದರೆ ಸಿಸಿಬಿ ಅಧಿಕಾರಿಗಳು ಇವರ ಸ್ನೇಹದ ಬಗೆಗಿನ ಸಾಕ್ಷ್ಯಗಳನ್ನು ತೋರಿಸಿದಾಗ ತಬ್ಬಿಬ್ಬಾದ ಡ್ರಗ್ಗಿಣಿಯರು ತಮ್ಮ ಹಾಗೂ ವೀರೇನ್ ಖನ್ನಾ ಸ್ನೇಹವನ್ನು ಒಪ್ಪಿಕೊಂಡರು. ನಂತರ ರಾಗಿಣಿಯವರು ‘ರವಿಶಂಕರ್ ಕೂಡ ನನಗೆ ಅಂಥಹದ್ದೇ ಪಾರ್ಟಿಯಲ್ಲಿ ಪರಿಚಯವಾದವರು’ ಎಂದು ರಾಗಿಣಿ ಹೇಳಿದ್ದಾರೆ ಎನ್ನಲಾಗಿದೆ.
ಈ ಪಾರ್ಟಿಗಳು ಕೇವಲ ಕುಡಿತಗಳಿಗೆ ಸೀಮಿತವಾಗಿರುತ್ತಿತ್ತೇ ಹೊರತು ಡ್ರಗ್ಸ್ ಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಆ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ಧಾರೆ. ಪೋಲಿಸರು, ನಟಿಯರ ಮಾದಕವಸ್ತು ಸೇವನೆ ಬಗ್ಗೆ ಉದ್ದೀಪನಮದ್ದು ಪರೀಕ್ಷೆಯಲ್ಲಿ ತಿಳಿದು ಬರಲಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More
ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
This website uses cookies.
Leave a Comment