November 14, 2025

Newsnap Kannada

The World at your finger tips!

download 3 2

ರಾಗಿಣಿ ಬಿಜೆಪಿ‌ ಪರ ಚುಣಾವಣಾ ಪ್ರಚಾರಕ್ಕೆ ರಾಜಕೀಯ ಬಣ್ಣ ಯಾಕೆ? ಸಂಸದ ಪ್ರತಾಪ್ ಸಿಂಹ

Spread the love

ನ್ಯೂಸ್ ಸ್ನ್ಯಾಪ್

ಮಡಿಕೇರಿ

ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಪೋಲೀಸರ ಬಂಧನದಲ್ಲಿರುವ ನಟಿ ರಾಗಿಣಿ ಬಿಜೆಪಿ ಪರ ಚುಣಾವಣಾ ಪ್ರಚಾರವನ್ನು ಮಾತ್ರ ಮಾಡಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ‌ ಎಂದು ಸಂಸದ ಪ್ರತಾಪ್ ಸಿಂಹ ಗುಡುಗಿದರು.

ಕೊಡಗಿನ ಬಲಮುರಿಯಲ್ಲಿ‌ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ನಂತರ ಮಾತನಾಡಿದ ಅವರು ‘ಡ್ರಗ್ಸ್ ಎಂಬುದು ಸಾಮಾಜಿಕ ಪಿಡಿಗು. ನಾವೆಲ್ಲ ಪಕ್ಷ ಬೇಧ ಮರೆತು ಅದರ ವಿರುದ್ಧ ಹೊಇರಾಟ ನಡೆಸಬೇಕು. ಈಗಾಗಲೇ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಡ್ರಗ್ಸ್ ಸೇವನೆಯ ಪರಿಣಾಗಳು, ಜಾಗೃತಿಗೋಸ್ಕರ ಟ್ವಿಟರ್ ಮೂಲಕ ಅಭಿಯಾನವನ್ನು ಆರಂಭಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ಮೇಲೂ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

‘ನಟಿ ರಾಗಿಣಿ ಕೆ.ಅರ್. ಪೇಟೆಯಲ್ಲಿ‌ನ ಚುಣಾವಣ ಸಂದರ್ಭದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಅದಕ್ಕೂ ಮುಂಚೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೂ ಅವರು ಪ್ರಚಾರ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದಕ್ಕೆ ರಾಜಕೀಯ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ’ ಎಂದು ಪ್ರತಾಪ್ ಸಿಂಹ ಹೇಳಿದರು

error: Content is protected !!