crime

ಅಮ್ಮ ಅರ್ಚನಾಳ ಕೊಲೆಗೆ ಸಂಚು ರೂಪಿಸಿದ ಮಗಳು ಯುವಿಕಾ ರೆಡ್ಡಿ ಸೇರಿ 7 ಮಂದಿ ಬಂಧನ

ಅರ್ಚನಾ ರೆಡ್ಡಿ ಪ್ರಕರಣ ಸಂಬಂಧ ಆರೋಪಿ ನವೀನ್‍ಗೆ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಅರ್ಚನಾ ಮಗಳು ಯುವಿಕಾ ರೆಡ್ಡಿಯನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಅರ್ಚನಾ ರೆಡ್ಡಿ ಕೊಲೆಯಾಗುವ ದಿನ ಅಮ್ಮನ ಚಲನವಲನದ ಬಗ್ಗೆ ಯುವಿಕಾ ರೆಡ್ಡಿ, ನವೀನ್‍ಗೆ ಮಾಹಿತಿ ನೀಡಿದ್ದಾಳೆ.

ಈ ಬಗ್ಗೆ ತನಿಖೆ ವೇಳೆ ಗೊತ್ತಾಗುತ್ತಿದಂತೆ ಯುವಿಕಾ ರೆಡ್ಡಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಯುವಿಕಾ ಅಮ್ಮನ ಬಾಯ್ ಫ್ರೆಂಡ್ ನವೀನ್‍ನನ್ನು ಗುಟ್ಟಾಗಿ ಮದುವೆಯಾಗಿದ್ದಳು. ಈ ಹಿಂದೆ ಅರ್ಚನಾ ರೆಡ್ಡಿ ಜೊತೆಗೂ ನವೀನ್‍ಗೆ ಸಂಬಂಧವಿತ್ತು. ಇದು ತಿಳಿದಿದ್ದರು ಕೂಡ ನವೀನ್ ಜೊತೆ ಯುವಿಕಾ ರಿಜಿಸ್ಟ್ರಾರ್ ಮ್ಯಾರೇಜ್ ಆಗಿದ್ದಳು.

ಬಳಿಕ ಅಮ್ಮನ ಆಸ್ತಿಯನ್ನು ಹೊಡೆಯಬೇಕು ಅಂದರೆ ಅವಳು ಸಾಯಬೇಕು ಎಂದು ನಿರ್ಧರಿಸಿ ಅಮ್ಮನನ್ನು ಯುವಿಕಾ ಕೊಲೆ ಮಾಡಲು ಮುಂದಾಗಿದ್ದಳು.

ಈ ನಡುವೆ ಯುವಿಕಾ, ನವೀನ್‍ನನ್ನು ಮದುವೆ ಆಗಿರುವ ವಿಚಾರ ಅರ್ಚನಾಗೆ ತಿಳಿದಿದೆ. ಹಾಗಾಗಿ ಇಬ್ಬರನ್ನೂ ಬೇರೆ ಮಾಡಲು ಅರ್ಚನಾ ಓಡಾಡ್ತಾ ಇದ್ದಳು. ಇದನ್ನು ಸಹಿಸದೇ ಅಮ್ಮನನ್ನೇ ಕೊಲೆ ಮಾಡಲು ಯುವಿಕಾ ಮುಂದಾಗಿದ್ದಾಳೆ. ಅಂತೆಯೇ ನವೀನ್‍ಗೆ ಸಹಾಯ ಮಾಡಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಮಗಳ ಐಷಾರಾಮಿ ಜೀವನ:

ಯುವಿಕಾ ಐಷಾರಾಮಿ ಜೀವನ ಮಾಡೋದಕ್ಕೆ ಇಷ್ಟ ಪಡುತ್ತಾ ಇದ್ದಳು. ಆದರೆ ಹಣ ಮಾತ್ರ ಅರ್ಚನಾ ಕೊಡುತ್ತಾ ಇರಲಿಲ್ಲ . ಹಣಕ್ಕಾಗಿ ಜಗಳವಾಡಿಕೊಂಡು ಮನೆಬಿಟ್ಟು ಹೋಗಿದ್ದ ಯುವಿಕಾ, ನವೀನ್ ಮನೆಗೆ ಹೋಗಿ ಉಳಿದುಕೊಂಡಿದ್ದಳು.

ನವೀನ್ ಬಳಿ ಹಣ ಇರಲಿಲ್ಲ. ನವೀನ್ ಕೂಡ ಯಾವುದೇ ಕೆಲಸ ಮಾಡುತ್ತಾ ಇರಲಿಲ್ಲ. ಇದರಿಂದಾಗಿ ಯುವಿಕಾಗೆ ಯಾವುದೇ ಐಷಾರಾಮಿ ಜೀವನ ಮಾಡೋಕೆ ಆಗುತ್ತಿರಲಿಲ್ಲ. ಹಾಗಾಗಿ ಅಮ್ಮನನ್ನು ಕೊಂದರೆ ಎಲ್ಲಾ ಆಸ್ತಿ ನಮ್ಮ ಪಾಲಿಗೆ ಬರುತ್ತೆ ಅಂದುಕೊಂಡು ನವೀನ್ ಜೊತೆ ಸಂಚುರೂಪಿಸಿ ಕೊಂದಿದ್ದಾಳೆ.
ಈ ನಡುವೆ ಅರ್ಚನಾ ತಾಯಿ ಕೂಡ ಇತ್ತೀಚೆಗೆ ನಿಧನರಾಗಿದ್ರು. ಅವರ ಅಷ್ಟು ಆಸ್ತಿಗೆ ಮುಂದಿನ ವಾರಸುದಾರರು ಅರ್ಚನಾ ಮತ್ತು ಯುವಿಕಾ ಮಾತ್ರ ಆಗಿದ್ದರು. ಹಾಗಾಗಿ ಅರ್ಚನಾ ನಂತರ ಆಸ್ತಿಗೆ ವಾರಸುದಾರರಳು ನಾನೇ ಎಂದು ಯುನಿಕಾ, ನವೀನ್ ಹಾಗೂ ಆತನ ಸ್ನೇಹಿತರ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಒಂದೂವರೆ ತಿಂಗಳುಗಳ ಕಾಲ ಅರ್ಚನಾ ಹತ್ಯೆಗೆ ಪ್ಲಾನ್ ನಡೆದಿತ್ತು. ಕೊಲೆ ಮಾಡಲು ಸ್ನೇಹಿತರಿಗೆ ನವೀನ್, ಕತೆಯೇ ಬೇರೆ ಹೇಳಿದ್ದ. ನಾನು ಅರ್ಚನಾಗೆ ಇಷ್ಟೆಲ್ಲಾ ಸಹಾಯ ಮಾಡಿದ್ದೆ. ಆದರೆ ನನ್ನನ್ನೇ ಮನೆಯಿಂದ ಹೊರ ಹಾಕಿದಳು ಅಂತ ಕಣ್ಣೀರಿನ ಕತೆ ಕಟ್ಟಿದ್ದ. ಆದರೆ ತನ್ನ ಸ್ನೇಹಿತರಿಗೆ ಯುವಿಕಾ ಜೊತೆಗಿದ್ದ ಅಕ್ರಮ ಸಂಬಂಧಧ ಬಗ್ಗೆ ನವೀನ್ ಹೇಳಿರಲಿಲ್ಲ.

7 ಮಂದಿ ಆರೋಪಿಗಳು ಬಂಧನ :
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ, ನವೀನ್ ಕುಮಾರ್ (ಅರ್ಚನಾ ಮೂರನೆ ಪತಿ), ಯುವಿಕಾ ರೆಡ್ಡಿ (ಅರ್ಚನಾ ರೆಡ್ಡಿ ಮಗಳು), ನವೀನ್‍ನ ಸ್ನೇಹಿತರಾದ ಸಂತೋಷ್, ಅನೂಪ್, ಆನಂದ್, ನರೇಂದ್ರ ಹಾಗೂ ದೀಪುವನ್ನು ಪೊಲೀಸರು ಬಂಧಿಸಿದ್ದಾರೆ.

Team Newsnap
Leave a Comment
Share
Published by
Team Newsnap

Recent Posts

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024