February 17, 2026

Newsnap Kannada

The World at your finger tips!

police 1

ಕಾನ್ಸ್‌ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ

Spread the love

ಪೊಲೀಸ್‌ ಕಾನ್ಸ್‌ಟೇಬಲ್‌ ನೇಮಕಾತಿಗಾಗಿ ದೈಹಿಕ ಸಾಮರ್ಥ್ಯ‌ ಪರೀಕ್ಷೆಯ ವೇಳೆ 1600 ಮೀಟರ್​ ಓಟದಲ್ಲಿ ಯುವಕನೊಬ್ಬ ಬಿದ್ದು ಸಾವಿಗೀಡಾದ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕನನ್ನು ಕೃಷ್ಣ ಜಿಲ್ಲೆಯ ಎ ಕೊಂಡೂರು ಗ್ರಾಮದ ಎನ್. ಚಂದ್ರಶೇಖರ್ (25) ಎಂದು ಗುರುತಿಸಲಾಗಿದೆ. ಮಚಲಿಪಟ್ಟಣಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಕೊನೆಯುಸಿರೆಳೆದಿದ್ದಾರೆ.

ಆಂಧ್ರ ಪ್ರದೇಶ ರಾಜ್ಯ ಮಟ್ಟದ ನೇಮಕಾತಿ ಮಂಡಳಿಯು ಪ್ರಾಥಮಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ಹಮ್ಮಿಕೊಂಡಿತ್ತು. ಕೃಷ್ಣ ಜಿಲ್ಲೆಯ ಅಭ್ಯರ್ಥಿಗಳಿಗಾಗಿ ಪೊಲೀಸ್ ಪರ್ಲ್ಸ್ ಮೈದಾನ, ಲಕ್ಷ್ಮೀ ಟಾಕೀಸ್ ಸೆಂಟರ್‌ನಲ್ಲಿ ದೈಹಿಕ ಪರೀಕ್ಷೆಯನ್ನು ಆಯೋಜಿಸಲಾಗಿತ್ತು.

ಗುರುವಾರ ನಡೆದ 1600 ಮೀಟರ್ ಓಟದ ಸ್ಪರ್ಧೆಯಲ್ಲಿ ಚಂದ್ರಶೇಖರ್ ಭಾಗವಹಿಸಿದ್ದರು. ಓಟದ ಮಧ್ಯೆ ಅವರು ಏಕಾಏಕಿ ಬಿದ್ದಾಗ, ತಕ್ಷಣವೇ ಪೊಲೀಸ್ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ, ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಅವರು ಸಾವಿಗೀಡಾದರು.ಇದನ್ನು ಓದಿ –ಎಲಿವೇಟೆಡ್ ಕಾರಿಡಾರ್ ಮೂಲಕ ಏರ್‌ಪೋರ್ಟ್ ರಸ್ತೆಯ ಟ್ರಾಫಿಕ್ ಸಮಸ್ಯೆಗೆ ಪರಿಹಾರ

ಈ ಘಟನೆಯಿಂದ ಚಂದ್ರಶೇಖರ್ ಕುಟುಂಬ ತೀವ್ರ ಆಘಾತಕ್ಕೆ ಒಳಗಾಗಿದೆ.

error: Content is protected !!