Trending

ವಿಶ್ವ ಸೈಕಲ್‌ ದಿನಾಚರಣೆ: ಸೈಕ್ಲಿಂಗ್-ಆರೋಗ್ಯಕ್ಕೂ ಸೈ, ಪ್ರಯಾಣಕ್ಕೂ ಜೈ!

ದೈಹಿಕ ಶ್ರಮವನ್ನು ಆಧರಿಸಿ ಚಲಿಸುವ ಅತಿ ಸರಳ ವಾಹನವಾದ ಸೈಕಲ್‌ ಜನಸಾಮಾನ್ಯರ ವಾಹನವಾಗಿದೆ. ಇಂದು ಸೈಕ್ಲಿಂಗ್ ನಿತ್ಯದ ಚಲನೆಯ ಅಗತ್ಯತೆಗಿಂತಲೂ ವ್ಯಾಯಾಮದ ಅವಶ್ಯಕತೆಗಾಗಿಯೇ ಹೆಚ್ಚು ಬಳಸಲ್ಪಡುತ್ತಿದೆ.

ವ್ಯಾಯಾಮಗಳಲ್ಲಿ ದೇಹದ ಎಲ್ಲಾ ಸ್ನಾಯುಗಳಿಗೆ ಕಸುವು ನೀಡುವ ಕೆಲವು ಸರಳ ವ್ಯಾಯಾಮಗಳೆಂದರೆ ನಡಿಗೆ ಮತ್ತು ಸೈಕ್ಲಿಂಗ್. ಈ ವ್ಯಾಯಾಮವನ್ನು ಕಡಿಮೆ ಪ್ರಾಬಲ್ಯದ ಏರೋಬಿಕ್ ವ್ಯಾಯಾಮವೆಂದೂ ಪರಿಗಣಿಸಲ್ಪಡಲಾಗುತ್ತದೆ ಹಾಗೂ ಇದರಿಂದ ಕೆಲವಾರು ಪ್ರಯೋಜನಗಳಿವೆ.

ಸರಳ ಪರಿಶ್ರಮದಿಂದ ಕಠಿಣ ಪರಿಶ್ರಮಗಳವರೆಗೆ ಇದನ್ನು ಬದಲಿಸಿಕೊಳ್ಳುವ ಅವಕಾಶ ಸೈಕ್ಲಿಂಗ್ ಅನ್ನು ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ ಸೂಕ್ತವಾದ ವ್ಯಾಯಾಮವಾಗಿಸಿದೆ. ಅಂದರೆ ಪ್ರಾರಂಭಿಕ, ಮಧ್ಯಮ ಅಥವಾ ಕಠಿಣ ವ್ಯಾಯಾಮಗಳಿಗೆ ಸೈಕ್ಲಿಂಗ್ ಸೂಕ್ತವಾಗಿದೆ.

ಇದನ್ನು ಓದಿ –ವಿಶ್ವ ನಗು ದಿನ –2022

ದಿನವಿಡೀ ಚಟುವಟಿಕೆಯಿಂದಿರಿಸಲು ಸೈಕ್ಲಿಂಗ್ ಅತ್ಯುತ್ತಮವಾದ ವ್ಯಾಯಾಮವಾಗಿದೆ. ದೇಹದಾರ್ಢ್ಯತೆ ಕಾಪಾಡಲು, ಆರೋಗ್ಯಕರ ಜೀವನಕ್ರಮ ಪಡೆಯಲು ಹಾಗೂ ವಿಶೇಷವಾಗಿ ಮಾನಸಿಕ ಮತ್ತು ದೈಹಿಕವಾಗಿ ಚೈತನ್ಯಶೀಲರಾಗಿರಲು ಸೈಕ್ಲಿಂಗ್ ಉತ್ತಮ ವ್ಯಾಯಾಮವಾಗಿದೆ.

ಇಂದು ಸೈಕ್ಲಿಂಗ್ ಎನ್ನುವುದು ಬಡವರ ವಾಹನ ಎಂಬ ಅನ್ವರ್ಥನಾಮವನ್ನು ಕಳೆದು ಎಲ್ಲಾ ವರ್ಗದ ಜನತೆಯೂ ಆರೋಗ್ಯಕ್ಕಾಗಿ ಬಳಸಬೇಕಾದ ವ್ಯಾಯಾಮ ಸಾಧನವಾಗಿದೆ.

ನಿತ್ಯದ ಚಟುವಟಿಕೆಗಳಲ್ಲಿ ಸೈಕ್ಲಿಂಗ್ ಅನ್ನು ಅಳವಡಿಸಿದ ಬಳಿಕ ನಿಮಗೆ ದೊರಕುವ ಪ್ರಯೋಜನಗಳು

ತೂಕದ ನಿರ್ವಹಣೆ

ಸೈಕ್ಲಿಂಗ್ ಅಥವಾ ಸೈಕಲ್ ತುಳಿಯುವಾಗ ದೇಹದಿಂದ ಕ್ಯಾಲೋರಿಗಳು ಹೆಚ್ಚೇ ಖರ್ಚಾಗುತ್ತವೆ. ಅದರಲ್ಲೂ ಕೊಂಚ ಹೆಚ್ಚು ಶ್ರಮದ ಸೈಕ್ಲಿಂಗ್ ಅಂದರೆ ಏರು ಏರುವಾಗ ದೇಹ ಅತಿ ಹೆಚ್ಚು ಕ್ಯಾಲೋರಿಗಳನ್ನು ಬಳಸಿಕೊಂಡು ಕೊಬ್ಬನ್ನು ಕರಗಿಸುತ್ತದೆ. ತೂಕ ಇಳಿಸುವ ಪ್ರಯತ್ನದಲ್ಲಿರುವವರಿಗೆ ಅವಶ್ಯಕವಾಗಿದೆ.

ಸೈಕ್ಲಿಂಗ್ ಮುಗಿಸಿ ಮನೆಗೆ ಬಂದು ವಿಶ್ರಾಂತಿ ಪಡೆಯುವಾಗಲೂ ಈ ಕ್ಯಾಲೋರಿಗಳ ದಹಿಸುವಿಕೆ ಮುಂದುವರೆಯುತ್ತದೆ,ಅಧಿಕ ತೂಕವನ್ನು ಕಳೆದುಕೊಳ್ಳುವ ಪ್ರಯತ್ನಗಳು ಹೆಚ್ಚು ಫಲದಾಯಕವಾಗುತ್ತವೆ.

ಕಾಲುಗಳ ಬಲ ಹೆಚ್ಚಿಸುತ್ತದೆ

ಸೈಕ್ಲಿಂಗ್ ನಲ್ಲಿ ಕಾಲುಗಳಿಗೆ ಹೆಚ್ಚಿನ ಬಲ ನೀಡುವ ಕಾರಣ ಕೆಳ ದೇಹದ ಸ್ನಾಯುಗಳ ಒಟ್ಟಾರೆ ಕಾರ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ನಿಮ್ಮ ಕಾಲಿನ ಸ್ನಾಯುಗಳನ್ನು ಅತಿಯಾದ ಒತ್ತಡವಿಲ್ಲದೆ ಹುರಿಗಟ್ಟಿಸಿ ಬಲಪಡಿಸುತ್ತದೆ.

ಇದು ನಿಮ್ಮ ತೊಡೆಗಳು, ಮೀನಖಂಡಗಳು, ಪಾದ, ಮೊಣಕಾಲು, ಒಟ್ಟಾರೆ ಕಾಲಿನ ಎಲ್ಲಾ ಸ್ನಾಯುಗಳಿಗೂ ಉತ್ತಮ ವ್ಯಾಯಾಮ ನೀಡುತ್ತದೆ. ಅಲ್ಲದೇ ಸೊಂಟದ ಸ್ನಾಯುಗಳಿಗೂ ಹೆಚ್ಚಿನ ವ್ಯಾಯಾಮ ದೊರೆತು ಹೊಟ್ಟೆಯ ಭಾಗದ ಕೊಬ್ಬು ಶೀಘ್ರ ಕರಗುತ್ತದೆ.

ಈಗ ತಾನೇ ವ್ಯಾಯಾಮ ಪ್ರಾರಂಭಿಸಿದವರಿಗೂ ಸೂಕ್ತವಾಗಿದೆ

ಯಾವುದೇ ವ್ಯಾಯಾಮಗಳು ದೇಹಕ್ಕೆ ಒಗ್ಗಬೇಕಾದರೆ ಮೊದಲಾಗಿ ಇವು ಸರಳವಾಗಿರಬೇಕು. ಏಕಾಏಕಿ ಹೆಚ್ಚಿನ ಶ್ರಮದ ವ್ಯಾಯಾಮಗಳನ್ನು ಮಾಡಬಾರದು. ಸೈಕ್ಲಿಂಗ್ ಇಂತಹ ಸರಳ ವ್ಯಾಯಾಮವಾಗಿದ್ದು ಯಾವುದೇ ವಯಸ್ಸಿನ ವ್ಯಕ್ತಿಗಳು ವ್ಯಾಯಾಮವನ್ನು ನಿತ್ಯದ ಅಭ್ಯಾಸವನಾಗಿಸಲು ಬಯಸುತ್ತಾರೋ ಅವರಿಗೆ ಅತಿ ಸೂಕ್ತವಾದ ವ್ಯಾಯಾಮವಾಗಿದೆ. ಹೊರಗೆ ಕೊಂಡು ಹೋಗುವ ಸೈಕಲ್ಲಿಗಿಂತಲೂ ಮನೆಯಲ್ಲಿಯೇ ತುಳಿಯುವ ಸೈಕಲ್ ಹೆಚ್ಚು ಸೂಕ್ತ.

ಸೊಂಟದ ಕೊಬ್ಬು ಕರಗಿಸಲು ಸೂಕ್ತ

ನಮ್ಮ ದೇಹದಲ್ಲಿ ಕೊಬ್ಬು ಸೊಂಟದ ಭಾಗದಲ್ಲಿ ಅತಿ ಹೆಚ್ಚಾಗಿ ಮತ್ತು ಮೊದಲನೆಯದಾಗಿ ಸಂಗ್ರಹಗೊಳ್ಳುತ್ತದೆ ಮತ್ತು ಅತಿ ಕಡೆಯದಾಗಿ ಕರಗುತ್ತದೆ. ಹಾಗಾಗಿ ಇದನ್ನು ಕರಗಿಸುವುದು ಭಾರೀ ಕಷ್ಟ. ಆದರೆ ಸೈಕ್ಲಿಂಗ್ ವ್ಯಾಯಾಮವನ್ನು ನಿತ್ಯವೂ ಅನುಸರಿಸುತ್ತಾ ಬಂದರೆ ಸೊಂಟದ ಭಾಗದ ಸ್ನಾಯುಗಳಿಗೆ ಅನಿವಾರ್ಯವಾಗಿ ಕೊಬ್ಬನ್ನು ಬಳಸಲೇಬೇಕಾಗುತ್ತದೆ.

ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ

ಮಾನಸಿಕ ಒತ್ತಡ, ಖಿನ್ನತೆ ಅಥವಾ ಉದ್ವೇಗ ಮೊದಲಾದ ಮನಸ್ಸಿಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸಲು ಮನಸ್ಸನ್ನು ಬೇರೊಂದು ಕಡೆಗೆ ಕೇಂದ್ರೀಕರಿಸಬೇಕಾಗುತ್ತದೆ. ಸೈಕ್ಲಿಂಗ್ ಮೂಲಕ ಹೀಗೆ ನಿಮ್ಮ ಗಮನವನ್ನು ರಸ್ತೆಯ ಕಡೆಗೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಹಾಗೂ ಈ ಕ್ಷಣದಲ್ಲಿ ವಹಿಸಬೇಕಾದ ಎಚ್ಚರಿಕೆ ಮೆದುಳನ್ನು ಸಕ್ರಿಯವಾಗಿರಿಸಿ ಈ ಎಲ್ಲಾ ಮಾನಸಿಕ ತೊಂದರೆಗಳಿಂದ ವಿಮುಖವಾಗಿಸುತ್ತದೆ. ಪರಿಣಾಮವಾಗಿ ಮೆದುಳು ಧನಾತ್ಮಕ ಚಿಂತನೆ ಪಡೆಯುತ್ತದೆ ಮತ್ತು ಈ ತೊಂದರೆಗಳನ್ನು ಇಲ್ಲವಾಗಿಸಲು ಸಾಧ್ಯವಾಗುತ್ತದೆ.

ಕ್ಯಾನ್ಸರ್ ರೋಗಿಗಳಿಗೆ ನೆರವಾಗಬಲ್ಲುದು

ಒಂದು ವೇಳೆ ಕ್ಯಾನ್ಸರ್ ರೋಗದ ವಿರುದ್ದ ಹೋರಾಡುತ್ತಿರುವ ರೋಗಿಗಳು ಸೈಕ್ಲಿಂಗ್ ಅನ್ನು ನಿತ್ಯದ ಚಟುವಟಿಕೆಯಾಗಿ ಅಳವಡಿಸಿಕೊಂಡರೆ ಇವರು ಗುಣಮುಖರಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸುತ್ತವೆ.ಸೈಕ್ಲಿಂಗ್ ನಿಂದ ದೇಹ ದ ಆರೋಗ್ಯ ಉತ್ತಮಗೊಳ್ಳುವ ಜೊತೆಗೇ ಕೆಲವು ಬಗೆಯ ಕ್ಯಾನ್ಸರ್ ಗಳು ಎದುರಾಗುವ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತವೆ.

ದಿನದ ಪ್ರಾರಂಭವನ್ನು ಧನಾತ್ಮಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ

ದಿನದ ಪ್ರಾರಂಭಿಕ ಚಟುವಟಿಕೆಗಳು ಮುಂದಿನ ಸಮಯದಲ್ಲಿ ಚಟುವಟಿಕೆಯಿಂದಿರಲು ನೆರವಾಗುತ್ತದೆ. ಮುಂಜಾನೆಯ ವ್ಯಾಯಾಮ, ನಡಿಗೆ, ಸೈಕ್ಲಿಂಗ್ ಎಲ್ಲವೂ ಚೇತೋಹಾರಿಯಾಗಿದ್ದು ದೇಹ ಮತ್ತು ಮನಸ್ಸನ್ನು ಮುದಗೊಳಿಸಲು ನೆರವಾಗುತ್ತವೆ.ಸೈಕ್ಲಿಂಗ್ ನಿಂದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ದಿನದ ಉಳಿದ ಕೆಲಸಗಳನ್ನು ನಿರ್ವಹಿಸಲು ಹೆಚ್ಚಿನ ಚೈತನ್ಯ ನೀಡುತ್ತದೆ.

ಬೆಳಗ್ಗಿನ ಹೊತ್ತು ಕೇವಲ ನೀರು ಅಥವಾ ದ್ರವಾಹಾರವನ್ನು ಸೇವಿಸಿ ನಡೆಸುವ ಸೈಕ್ಲಿಂಗ್ ಕಡಿಮೆ ತೀವ್ರತೆಯ ಮತ್ತು ಹೆಚ್ಚಿನ ಕೊಬ್ಬು ಬಳಸುವ ವ್ಯಾಯಾಮವಾಗಿದ್ದು ಹೆಚ್ಚು ಫಲಕಾರಿಯಾಗಿದೆ.

Team Newsnap
Leave a Comment
Share
Published by
Team Newsnap

Recent Posts

ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋವಿಂದಪ್ಪ ಸಿದ್ದಾಪುರ ಎಂಬುವರು… Read More

May 6, 2024

ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

ಮಂಗಳೂರು : ಬಂಟ್ವಾಳದ (Bantwal) ನಾವೂರಿನಲ್ಲಿ ಪೋಷಕರ ಎದುರೇ ಇಬ್ಬರು ಮಕ್ಕಳು ನೀರುಪಾಲಾದ ಘಟನೆ ನಡೆದಿದೆ. ಅನ್ಸಾರ್ ಅವರ ಪುತ್ರಿ… Read More

May 6, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024