February 18, 2026

Newsnap Kannada

The World at your finger tips!

krs dam

KRS ಡ್ಯಾಂನಿಂದ ಕೃಷಿಗೆ ನೀರು: ವೇಳಾಪಟ್ಟಿ ಪ್ರಕಟ

Spread the love

ಮಂಡ್ಯ, ಜನವರಿ 07: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಪರಿಣಾಮ, ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ (KRS) ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಜನವರಿಯಲ್ಲಿಯೂ ಡ್ಯಾಂನ ನೀರಿನ ಮಟ್ಟ 124 ಅಡಿಗಳಿಂದ ಕೆಳಗೆ ಇಳಿಯದೇ ಇದ್ದು, ರೈತರಿಗೆ ಮತ್ತು ಕುಡಿಯುವ ನೀರಿಗಾಗಿ ಇದೊಂದು ಸುದಿನವಾಗಿದೆ.

ನೀರು ಬಿಡುಗಡೆ ಸಂಬಂಧ ಸಭೆ:
ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಕೆಆರ್‌ಎಸ್ ಡ್ಯಾಂನಿಂದ ಕೃಷಿಗೆ ನೀರು ಹರಿಸುವ ಕುರಿತಾಗಿ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದರು. ಸಭೆಯಲ್ಲಿ ಜನವರಿ 10ರಿಂದ 18 ದಿನಗಳ ಕಾಲ ಕಟ್ಟುಪದ್ಧತಿಯಲ್ಲಿ ನೀರು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನೀರು ಬಿಡುಗಡೆ ವೇಳಾಪಟ್ಟಿ:
ಮಾಧ್ಯಮಗಳೊಂದಿಗೆ ಮಾತನಾಡಿದ ಎನ್. ಚಲುವರಾಯಸ್ವಾಮಿ, “ಡ್ಯಾಂನಿಂದ 18 ದಿನಗಳ ಕಾಲ ನೀರು ಹರಿಸಲಾಗುವುದು. ಈ ಅವಧಿಯ ಬಳಿಕ 12 ದಿನಗಳ ಕಾಲ ನೀರು ನಿಲುಗಡೆ ಮಾಡಲಾಗುವುದು. ಈ ವಿಧಾನವನ್ನು ನಾಲ್ಕು ಬಾರಿ ಪುನರಾವರ್ತಿಸಲಾಗುವುದು. ಜಿಲ್ಲೆಯಲ್ಲಿ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ಕೊನೆಯ ಭಾಗಗಳಿಗೂ ನೀರು ಪೂರೈಕೆ ಮಾಡಲಾಗುವುದು” ಎಂದರು.

cheluvaraya swamy

ರೈತರಿಗೆ ಸೂಚನೆ:
“ರೈತರು ಅಲ್ಪಾವಧಿ ಬೆಳೆಗಳಿಗೆ ನಾಟಿ ಆರಂಭಿಸಬೇಕು. ಕೃಷಿ ಮತ್ತು ನೀರಾವರಿ ಇಲಾಖೆಯ ಸಲಹೆಗಳನ್ನು ಅನುಸರಿಸಿ, ಎರಡನೇ ಬೆಳೆಗಳನ್ನು ಬೆಳೆದು ಸಹಕಾರ ನೀಡಬೇಕು” ಎಂದು ಸಚಿವರು ತಿಳಿಸಿದರು.

ಇತಿಹಾಸದ ದಾಖಲೆ:
ಎನ್. ಚಲುವರಾಯಸ್ವಾಮಿ, “ಇತಿಹಾಸದಲ್ಲಿ ಇದೇ ಮೊದಲು 92 ವರ್ಷಗಳ ಬಳಿಕ 156 ದಿನಗಳ ಕಾಲ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 124.48 ಅಡಿಗಳಷ್ಟು ನಿರಂತರವಾಗಿ ಉಳಿಯುತ್ತಿದೆ. ಟೀಕೆ ಮಾಡುವವರಿಗೆ ಇದು ಸ್ಪಷ್ಟ ಉತ್ತರ” ಎಂದು ಹೇಳಿದರು.

ಮುಂಗಾರು ಮಳೆಯಿಂದ ಲಾಭ:
2024ರ ಜುಲೈ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್‌ಎಸ್ ಡ್ಯಾಂಗೆ ಬಾಗಿನ ಅರ್ಪಿಸಿದ ಬಳಿಕ, ಮುಂಗಾರು ಮಳೆ ಉತ್ತಮವಾಗಿ ಮುಂದುವರಿಯಿತು. ಚಂಡಮಾರುತದ ಪರಿಣಾಮ ಮಳೆಯಾಗುತ್ತಲೇ ಇದ್ದು, ಜನವರಿಯಲ್ಲಿಯೂ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ.

2023ರಲ್ಲಿ ಮುಂಗಾರು ಮಳೆಯ ಕೊರತೆಯಿಂದ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗಿರಲಿಲ್ಲ. ಇದರಿಂದಾಗಿ ರೈತರಿಗೆ ನೀರಿನ ಕೊರತೆಯುಂಟಾಗಿ ಬೆಳೆ ಹಾನಿಯಾಗಿತ್ತು. ಆದರೆ ಈ ಬಾರಿ ಡ್ಯಾಂ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ರೈತರು ಆತಂಕವಿಲ್ಲದೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.ಇದನ್ನು ಓದಿ –BBMP ಕಚೇರಿಯಲ್ಲಿ ಇಡಿ ದಾಳಿ: 960 ಕೋಟಿ ರೂ. ಅಕ್ರಮ ತನಿಖೆ

ಡ್ಯಾಂನ ನೀರಿನ ಮಟ್ಟ ಉತ್ತಮವಾಗಿರುವುದರಿಂದ ಬೆಂಗಳೂರು ನಗರಕ್ಕೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!