ಮಹಾಮಾರಿ ಕೊರೋನಾ ವಿರುದ್ಧ ಹೋರಾಡಿದವರ ಜೀವನವನ್ನು ಬಲಿ ಪಡೆದಿದೆ. ‘ಕೋರೋನಾ ವಾರಿಯರ್ಸ್ ಮೃತರಾದರೆ ಅವರನ್ನು ಹುತಾತ್ಮರೆಂದು ಕರೆಯಿರಿ’ ಎಂದು ಸೂಚನೆ ನೀಡಿದರು.
ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ, ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು ‘ಹೇಗೆ ಮೃತರಾದ ಯೋಧರಿಗೆ ಗೌರವ ಸಿಗುತ್ತದೆಯೋ ಹಾಗೆಯೇ ಕೊರೋನಾ ವಾರಿಯರ್ಸ್ಗಳಿಗೂ ಸಹ ಅದೇ ರೀತಿಯ ಗೌರವ ಸಿಗಬೇಕು’ ಎಂದು ಹೇಳಿದರು.
‘ದಸರಾ ಉದ್ಘಾಟನೆ ಹಾಗೂ ಕೊರೋನಾ ವಾರಿಯರ್ಸ್ಗಳಿಗೆ ಅಭಿನಂದನೆ ಸಲ್ಲಿಸಿದ್ದು ನನ್ನ ಜೀವಿತಾವಧಿಯ, ವೈದ್ಯ ಸಮುದಾಯಕ್ಕೆ ಕೊಟ್ಟ ದೊಡ್ಡ ಗೌರವ’ ಎಂದರು.
ದೇವಿಯ ಮುಂದೆ 3 ಬೇಡಿಕೆ
ಇಂದು ನಾನು ಚಾಮುಂಡೇಶ್ವರಿ ತಾಯಿಯಲ್ಲಿ ಬೇರೆ ಏನೂ ಬೇಡಿಕೊಂಡಿಲ್ಲ. ಕೊರೋನಾ ಸಂಪೂರ್ಣ ಗುಣವಾಗಲಿ, ಕೊರೋನಾ ಲಸಿಕೆ ಬರಲಿ, ರಾಜ್ಯದಲ್ಲಿ ವರುಣ ಆರ್ಭಟವೂ ನಿಲ್ಲಲಿ ಎಂದು ಬೇಡಿಕೊಂಡಿದ್ದೇನೆ’ ಎಂದು ತಿಳಿಸಿದರು.
‘ಈ ವರ್ಷ ಕೊರೋನಾ ಲಸಿಕೆ ಸಿಗುವ ಸಂಭವ ಕಡಿಮೆ ಇದೆ. 2021ರ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಲಸಿಕೆ ಸಿಗಬಹುದು. ಯಾರಾದರೂ ಕೊರೋನಾ ಸೋಂಕು ಪೀಡಿತರಾದರೆ ಅವರನ್ನು ಅಸ್ಪೃಶ್ಯರಂತೆ ಕಾಣಬೇಡಿ. ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿರುವದಲ್ಲದೇ ಅವರೂ ಸಹ ಕೊರೋನಾ ಪೀಡಿತರಾಗುತ್ತಿದ್ದಾರೆ. ಹಾಗಾಗಿ ವೈದ್ಯರ ಮೇಲೆಯಾಗಲೀ, ಆಸ್ಪತ್ರೆಯ ಮೇಲಾಗಲೀ ಹಲ್ಲೆ ಮಾಡಬೇಡಿ. ಗ್ರಾಮೀಣ ಭಾಗದ ವೈದ್ಯರಿಗೆ ರಕ್ಷಣೆ ಇಲ್ಲದಿರುವದರಿಂದ ಗ್ರಾಮೀಣ ಪ್ರದೇಶಗಲಳಿಗೆ ವೈದ್ಯರು ತೆರಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಜಿಲ್ಲಾ ಪಂಚಾಯತ್ನಿಂದ ಜಿಲ್ಲಾ ಕೇಂದ್ರದ ನಿಯಂತ್ರಣಕ್ಕೊಳಪಡಿಸಬೇಕು’ ಎಂದು ಸಲಹೆ ನೀಡಿದರು.
ಸಾಮಾಜಿಕ ಜಾಲತಾಣಗಳು ಸಮಾಜ ಒಡೆಯುತ್ತಿರುವ ಬಗೆಗೆ ವಿಷಾದ ವ್ಯಕ್ತಪಡಿಸಿದ ಅವರು ‘ಜಗತ್ತಿನಲ್ಲಿ ಬದುಕುವ ಭಾಷೆ ಇಂಗ್ಲಿಷ್. ಆದರೆ ನಮಗೆ ನಮಗೆ ಕನ್ನಡವೇ ಕಣ್ಣಾಗಬೇಕು.ಕನ್ನಡಕವಲ್ಲ’ ಎಂದು ಹೇಳಿದರು.
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More
ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More
ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ಶಾಸಕ… Read More
ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More
This website uses cookies.
Leave a Comment