ಸಂಸದೆ ಸುಮಲತಾ ಅಂಬರೀಶ್ಗೆ ಮಂಡ್ಯ ರೈತ ಸಂಘಟನೆಗಳ ಮುಖಂಡರು ವಾರ್ನಿಂಗ್ ಕೊಟ್ಟಿದ್ದಾರೆ.
ಸಂಸದೆ ಸುಮಲತಾ ನಿಜವಾದ ರೈತರು ಯಾರು ಎಂದು ಸ್ಪಷ್ಟಪಡಿಸಬೇಕು.
ಸಿಎಂ ನೇತೃತ್ವದಲ್ಲಿ ನಡೆಸ ಮೈಶುಗರ್ ಸಭೆಯಲ್ಲಿ ಸುಮಲತಾ ನಮ್ಮನ್ನು ರೈತರೇ ಅಲ್ಲ ಎಂದು ಹೇಳಿದ್ದಾರೆ ನಮಗೆ ಬಹಳ ನೋವಾಗಿದೆ ಎಂದು ರೈತ ನಾಯಕರು ಹೇಳಿದ್ದಾರೆ
ಸುಮಲತ ನಿನ್ನೆ ಸಭೆಯಲ್ಲಿ ಮೈಶುಗರ್ ಫ್ಯಾಕ್ಟರಿ ವಿಚಾರದಲ್ಲಿ ನಿಜವಾದ ರೈತರ ಅಭಿಪ್ರಾಯ ಪಡೆಯಬೇಕು ಎಂದು ಒತ್ತಡ ಹಾಕಿದ್ದರು ಎನ್ನಲಾಗಿದೆ.
ಅಲ್ಲದೇ ಸಭೆಯಲ್ಲಿ ಭಾಗಿಯಾದವರು ರೈತರಲ್ಲ, ಬದಲಿಗೆ ಸಂಘಟನೆ ಮುಖಂಡರು ಎಂದು ಜರಿದಿದ್ದರು ಎಂದು ತಿಳಿದು ಬಂದಿದೆ.
ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ರೈತರೇ. ಹರಿದ ಬಟ್ಟೆ ಹಾಕಿಕೊಂಡವರು ಮಾತ್ರ ರೈತರಾ? ನಿಜವಾದ ರೈತರು ಯಾರು ಎಂದು ಸುಮಲತಾ ಹೇಳಲಿ. ನಮ್ಮ ಭಾವನೆಗಳ ಜತೆ ಸುಮಲತಾ ಚೆಲ್ಲಾಟ ಆಡೋದು ಬೇಡ. ಮೈಶುಗರ್ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಬೇಕು ಎಂಬುದು ನಮ್ಮ ಒತ್ತಾಯ. ಇವರಿಗೆ ಆರಂಭದಿಂದಲೂ ಖಾಸಗೀಕರಣದ ಮೇಲೆಯೇ ಹೆಚ್ಚು ಒಲವು ಎಂದು ಕಿಡಿಕಾರಿದ್ದಾರೆ.
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ