February 26, 2026

Newsnap Kannada

The World at your finger tips!

MP,mandya,election

Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಸಂಸದೆ ಸುಮಲತಾಗೆ ರೈತ ಸಂಘಟನೆಗಳ ಮುಖಂಡರ ವಾರ್ನಿಂಗ್

Spread the love

ಸಂಸದೆ ಸುಮಲತಾ ಅಂಬರೀಶ್​​ಗೆ ಮಂಡ್ಯ ರೈತ ಸಂಘಟನೆಗಳ ಮುಖಂಡರು ವಾರ್ನಿಂಗ್​​​ ಕೊಟ್ಟಿದ್ದಾರೆ.

ಸಂಸದೆ ಸುಮಲತಾ ನಿಜವಾದ ರೈತರು ಯಾರು ಎಂದು ಸ್ಪಷ್ಟಪಡಿಸಬೇಕು.

ಸಿಎಂ ನೇತೃತ್ವದಲ್ಲಿ ನಡೆಸ ಮೈಶುಗರ್​​ ಸಭೆಯಲ್ಲಿ ಸುಮಲತಾ ನಮ್ಮನ್ನು ರೈತರೇ ಅಲ್ಲ ಎಂದು ಹೇಳಿದ್ದಾರೆ ನಮಗೆ ಬಹಳ ನೋವಾಗಿದೆ ಎಂದು ರೈತ ನಾಯಕರು ಹೇಳಿದ್ದಾರೆ

ಸುಮಲತ​​ ನಿನ್ನೆ ಸಭೆಯಲ್ಲಿ ಮೈಶುಗರ್​ ಫ್ಯಾಕ್ಟರಿ ವಿಚಾರದಲ್ಲಿ ನಿಜವಾದ ರೈತರ ಅಭಿಪ್ರಾಯ ಪಡೆಯಬೇಕು ಎಂದು ಒತ್ತಡ ಹಾಕಿದ್ದರು ಎನ್ನಲಾಗಿದೆ.

ಅಲ್ಲದೇ ಸಭೆಯಲ್ಲಿ ಭಾಗಿಯಾದವರು ರೈತರಲ್ಲ, ಬದಲಿಗೆ ಸಂಘಟನೆ ಮುಖಂಡರು ಎಂದು ಜರಿದಿದ್ದರು ಎಂದು ತಿಳಿದು ಬಂದಿದೆ.

ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲರೂ ರೈತರೇ. ಹರಿದ ಬಟ್ಟೆ ಹಾಕಿಕೊಂಡವರು ಮಾತ್ರ ರೈತರಾ? ನಿಜವಾದ ರೈತರು ಯಾರು ಎಂದು ಸುಮಲತಾ ಹೇಳಲಿ. ನಮ್ಮ ಭಾವನೆಗಳ ಜತೆ ಸುಮಲತಾ ಚೆಲ್ಲಾಟ ಆಡೋದು ಬೇಡ. ಮೈಶುಗರ್​​ ಸಕ್ಕರೆ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಬೇಕು ಎಂಬುದು ನಮ್ಮ ಒತ್ತಾಯ. ಇವರಿಗೆ ಆರಂಭದಿಂದಲೂ ಖಾಸಗೀಕರಣದ ಮೇಲೆಯೇ ಹೆಚ್ಚು ಒಲವು ಎಂದು ಕಿಡಿಕಾರಿದ್ದಾರೆ.

error: Content is protected !!