ಈ ರೀತಿಯಲ್ಲಿ ಅಂದಿನ ಕೋಲಾರದ ಮುದ್ದೇನಹಳ್ಳಿಯಲ್ಲಿ ಕಡು ಬಡತನದಲ್ಲಿ 1860 ಸೆಪ್ಟೆಂಬರ್ 15 ರಂದು ಜನಿಸಿದ ಬಾಲಕನೊಬ್ಬ ತನ್ನ ಶ್ರಮ, ಪ್ರಾಮಾಣಿಕತೆ, ಪರಿಶುದ್ಧತೆ, ಕಾಯಕ ನಿಷ್ಠೆ, ಎಲ್ಲವನ್ನೂ ಮೈಗೂಡಿಸಿಕೊಂಡು ಸಂಪೂರ್ಣ ವ್ಯಕ್ತಿತ್ವವಾಗಿ ‘ಭಾರತ ರತ್ನ’ ವಾಗಿದ್ದು ಮತ್ತು ಬ್ರಿಟಿಷರಿಂದ ‘ಸರ್’ ಎನಿಸಿಕೊಂಡು ಇವತ್ತಿನ ನಮ್ಮ ನವ ತಂತ್ರಜ್ಞಾನದಡಿಯ ಹೊಸ ನಾಡಿನ ತಳಪಾಯವನ್ನು ಅಂದೇ ಆರ್ಥಿಕ ನೆಲೆಯಲ್ಲಿ, ಶಿಕ್ಷಣದ ನೆಲೆಯಲ್ಲಿ, ಹೊಸ ಯೋಜನೆಗಳ ನೆಲೆಯಲ್ಲಿ, ಕೈಗಾರಿಕೆಗಳ ನೆಲೆಯಲ್ಲಿ, ಸಾಹಿತ್ಯಕ ನೆಲೆಯಲ್ಲಿ ಹೀಗೆ ವಿವಿಧ ಆಯಾಮಗಳಲ್ಲಿ ದೂರ ದೃಷ್ಟಿ ಹೊಂದಿ, ಕನಸು ಕಂಡು ಅದನ್ನು ನನಸಾಗಿಸಿದ ಅಪರೂಪದಲ್ಲಿ ಅಪರೂಪದ ಕನ್ನಡ ನಾಡಿನ ಅಭಿಯಂತರ ರತ್ನ ನಮ್ಮ ನಿಮ್ಮೆಲ್ಲರ ಸರ್ ವಿಶ್ವೇಶ್ವರಯ್ಯ ನವರು.
ಭಾರತ ರತ್ನ ಎನಿಸಿಕೊಳ್ಳುವುದು ಸುಲಭವೇ!
ಸೃಜನಶೀಲ ಮನಸು:
ಭೋರ್ಗರೆವ ಜೋಗದ ಜಲಪಾತದ ಮುಂದೆ ನಿಂತು ಆ ಸೌಂದರ್ಯದ ಸೊಬಗನ್ನು ನೋಡಿ Wow.. What a beautiful falls ಎಂದು ನಾವು ನೀವೆಲ್ಲ ಉದ್ಘರಿಸುತ್ತೇವೆ.ಸೃಜನಶೀಲ ಮನಸ್ಸು ಅದೇ ಭೋರ್ಗರೆವ ಜಲಪಾತವನ್ನು ನೋಡಿದಾಗ What a waste ಎಂದಿತ್ತು. ಸಾಮಾನ್ಯ ಮನಸ್ಸು ಸೌಂದರ್ಯವನ್ನು ಮಾತ್ರ ನೋಡಿದರೆ, ಸೃಜನಶೀಲ ಮನಸ್ಸು ಪೋಲಾಗುತ್ತಿರುವ ಜಲ ವಿದ್ಯುತ್ತಿನ ಆಗರವನ್ನೇ ನೋಡಿತ್ತು. ಆ ಜಲಧಾರೆಯಿಂದ ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಹೇಳಿತು. ಆ ಮನಸೇ ಸರ್ ಎಂ ವಿಶ್ವೇಶ್ವರಯ್ಯನವರು.
ನಿಖರವಾದ ವೀಕ್ಷಣೆ:
ರೈಲಿನಲ್ಲಿ ವಿಶ್ವೇಶ್ವರಯ್ಯನವರು ಪ್ರಯಾಣ ಮಾಡುತ್ತಿದ್ದಾಗ ಮಧ್ಯರಾತ್ರಿ ಏಕಾಏಕಿ ಆ ರೈಲಿನ ಭೋಗಿಯ ಒಳಗಿನ ಚೈನನ್ನು ಎಳೆದು ರೈಲನ್ನು ನಿಲ್ಲಿಸಿದರು. ಎಲ್ಲಾ ಸಹ ಪ್ರಯಾಣಿಕರು ಈ ನಡೆಗೆ ಇವರನ್ನು ವಿರೋಧಿಸಿದರು. ಕಾರಣ ಕೇಳಿದಾಗ ಮುಂದೆ ರೈಲ್ವೆ ಹಳ್ಳಿಗಳು ಮುರಿದು ಹೋಗಿವೆ. ರೈಲು ದುರಂತ ಸಂಭವಿಸಬಾರದೆಂದು ನಾನು ರೈಲನ್ನು ನಿಲ್ಲಿಸಿದ್ದೇನೆ ಎಂದು ಹೇಳಿದರು. ಮುಂದೆ ಅಧಿಕಾರಿಗಳು ಸಹ ಪ್ರಯಾಣಿಕರು ಇಳಿದು ರೈಲಿನ ಹಳ್ಳಿಯನ್ನು ಅವಲೋಕಿಸಿದಾಗ ವಿಶ್ವೇಶ್ವರಯ್ಯನವರು ಹೇಳಿದಂತೆ ರೈಲು ಹಳಿಗಳು ತುಂಡಾಗಿದ್ದವು. ಈ ನಿಖರವಾದ ವೀಕ್ಷಣೆ ವಿಶ್ವೇಶ್ವರಯ್ಯನವರ ನಿಖರತೆಯನ್ನು ತೋರಿಸುತ್ತದೆ. ಭಾರತ ರತ್ನ ಎನಿಸಿಕೊಳ್ಳುವುದು ತಮಾಷೆಯೇ!
ಸ್ವಾಭಿಮಾನಿ:
ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಹೊರಡುವಾಗ ಪಯಣಿಸಲು ಹಣವಿಲ್ಲವೆಂದು 35km ನಡೆದೇ ಪರೀಕ್ಷೆ ಕೇಂದ್ರವನ್ನು ತಲುಪಿದ ಸ್ವಾಭಿಮಾನಿ ಇವರು.
ಪ್ರಾಮಾಣಿಕತೆ:
ಮೈಸೂರಿನ ದಿವಾನರಾಗಿ ಕೆಲಸ ಮಾಡುತ್ತಿರುವಾಗ ಸರ್ಕಾರಿ ಕೆಲಸ ಮಾಡುತ್ತಿರುವಾಗ ಸರ್ಕಾರವು ಕೊಟ್ಟ ಮೊಂಬತ್ತಿಯನ್ನು ಉರಿಸುತ್ತಿದ್ದರು. ಆ ಕೆಲಸ ಮುಗಿದ ತಕ್ಷಣವೇ ಸರ್ಕಾರದ ಮೊಂಬತ್ತಿಯನ್ನು ಆರಿಸಿ ತಮ್ಮ ಸ್ವಂತದ ಮೊಂಬತ್ತಿಯನ್ನು ಹಚ್ಚುತ್ತಿದ್ದರು.
ಪರಿಶ್ರಮಿ:
ಬಡತನದ ನೆಪ ಹೇಳಿ ಸುಮ್ಮನೆ ಕುಳಿತುಕೊಳ್ಳದೆ ತಮ್ಮ ಪದವಿಯನ್ನು ಓದುವಾಗ ಮಕ್ಕಳಿಗೆ ಮನೆ ಪಾಠ ಮಾಡಿ ತಮ್ಮ ಖರ್ಚನ್ನು ನಿಭಾಯಿಸಿಕೊಳ್ಳುತ್ತಿದ್ದ ಪರಿಶ್ರಮಯವರು.
ಮೇಲಿನ ಇಷ್ಟೆಲ್ಲ ಗುಣಗಳು ಒಬ್ಬ ವ್ಯಕ್ತಿಯ ಹತ್ತಿರ ಇದ್ದಾಗ ಆ ವ್ಯಕ್ತಿ ಮೇಲೆ ಏರದೇ ಇರಲು ಸಾಧ್ಯವೇ!
ಮೈಸೂರು ಮತ್ತು ವಿಶ್ವೇಶ್ವರಯ್ಯನವರ ನಂಟು:
ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರವರು ವಿಶ್ವೇಶ್ವರಯ್ಯನವರ ಖ್ಯಾತಿ, ಕಾರ್ಯವೈಖರಿಯನ್ನು ಕಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿ 1909ರ ನವೆಂಬರ್ನಲ್ಲಿ ಮೈಸೂರು ರಾಜ್ಯದ ಪ್ರಮುಖ ಅಭಿಯಂತರರ ಹುದ್ದೆಗೆ ನೇಮಿಸಿಕೊಂಡರು. ಆದರೇ ಅವರಿಗೆ ಮಾಮೂಲಿ ನೀರಿನ ಕೆಲಸ ಮಾಡಲು ಇಷ್ಟವಿರಲಿಲ್ಲ ಬದಲಿಗೆ ರಾಜರ ಸಮ್ಮತಿ ಪಡೆದು ಕೈಗಾರಿಕೆ ಹಾಗೂ ತಾಂತ್ರಿಕ ಶಿಕ್ಷಣ ಅಭಿವೃದ್ದಿ ಪಡಿಸಲು ಮುಂದಾದರು. ನಂತರ 1912ರಲ್ಲಿ ದಿವಾನರಾಗಿ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು.
ಇವರ ಏಳು ವರ್ಷಗಳ ದಿವಾನ್ ಅವಧಿಯಲ್ಲಿ ಇವರ ಕೊಡುಗೆಗಳು ಮುಂದಿನ ಪೀಳಿಗೆಗೂ ಉಪಯುಕ್ತ.
ಕೃಷ್ಣರಾಜ ಸಾಗರ ಅಣೆಕಟ್ಟು (ಕನಂಬಾಡಿ ಕಟ್ಟೆ): ನಾಲ್ವಡಿ ಕೃಷ್ಣರಾಜ ಒಡೆಯರು ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಸರ್.ಎಂ.ವಿ ಯವರ ಬಳಿ ಪ್ರಸ್ತಾಪ ಮಾಡಿದರು. ಇದಕ್ಕೂ ಮೊದಲು ಸರ್.ಎಂ.ವಿ ಯವರು ಪುಣೆಯ ಖಡಕ್ ವಾಸ್ಲಾ ಜಲಾಶಯದ ಎತ್ತರ ಹೆಚ್ಚಿಸುವ ಕಾರ್ಯ ಮಾಡಿದ್ದರು. ಈ ವಾಸ್ಲಾ ಅಣೆಕಟ್ಟು ಪ್ರತಿ ಮುಂಗಾರಿನಲ್ಲಿ ತುಂಬಿ ಹೊರ ಹರಿಯುತ್ತಿತ್ತು ಮತ್ತು ಶೇಖರಿಸಿದ್ದ ನೀರು ಬೇಸಿಗೆಯಲ್ಲಿ ಸಾಲುತ್ತಿರಲಿಲ್ಲ. ಆಗ ವಿಶ್ವೇಶ್ವರಯ್ಯನವರು ಜಲಾಶಯದ ಸಾಮರ್ಥ್ಯ ಹೆಚ್ಚಿಸುವುದರ ಜೊತೆಗೆ ಸ್ವಯಂಚಾಲಿತ ನೀರು ನಿಯಂತ್ರಕ ದ್ವಾರಗಳನ್ನು (ಫ್ಲಡ್ ಗೇಟ್ಸ್) ಅಳವಡಿಸಿ “ಪೇಟೆಂಟ್” (ಹೊಸ ಆವಿಷ್ಕಾರದ ಸ್ವಾಮ್ಯತೆ) ಕೂಡ ಪಡೆದಿದ್ದರು, ಹಾಗೂ ಈ ಮೊದಲು ಅವರು ಈಜಿಪ್ಟ್ ದೇಶದ ಆಸ್ವಾನ್ ಮತ್ತು ಇತರೆ ದೊಡ್ಡ ದೊಡ್ಡ ಜಲಾಶಯಗಳ ಅಧ್ಯಯನ ಮಾಡಿ ಬಂದಿದ್ದರು. ಇದೆಲ್ಲದರ ಜ್ಞಾನದ ಪರಿಣಾಮ ಕೃಷರಾಜ ಅಣೆಕಟ್ಟಿನ ವಿನ್ಯಾಸ ರಚಿಸಿದರು. ಪ್ರಜೆಗಳ ಹಿತಕ್ಕಾಗಿ ಕೃಷ್ಣರಾಜ ಒಡೆಯರು ತಮ್ಮ ಬಂಗಾರವನ್ನ ಮಾರಾಟ ಮಾಡಿ ಅಣೆಕಟ್ಟನ್ನು ಪೂರ್ಣಮಾಡಲಾಯಿತು.
ಮೈಸೂರು ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ: 1916 ರಲ್ಲಿ ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಗೆ ಮೈಸೂರು ಮಹಾರಾಜರು ಭೇಟಿ ನೀಡಿ ಅಲ್ಲಿ ಸಂಗ್ರಹಿಸಿಟ್ಟಿದ್ದ ಶ್ರೀಗಂಧ ಮರದ ತುಂಡುಗಳ ರಾಶಿಯನ್ನು ಕಂಡು ಆ ಮರಗಳಿಂದ ಗಂಧದ ಎಣ್ಣೆ ತೆಗೆಯುವ ಆಲೋಚನೆ ಮಾಡಿ ದಿವಾನರಾಗಿದ್ದ ಸರ್.ಎಂ. ವಿ ಹಾಗೂ ಸರ್ ಆಲ್ಫ್ರೆಡ್ ಚಾಟರ್ಟನ್ ಜತೆಗೆ ಚರ್ಚಿಸಿದ ಮಹಾರಾಜರು, ಶ್ರೀಗಂಧದ ಎಣ್ಣೆ ತೆಗೆಯುವುವ ಯೋಜನೆ ಸಿದ್ಧಪಡಿಸಲು ಸೂಚಿಸಿದರು. ರಾಜರ ಸೂಚನೆ ಮೇರೆಗೆ ಬೆಂಗಳೂರಿನ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ನ (ಐಐಎಸ್ಸಿ) ವಿಜ್ಞಾನಿಗಳು ಗಂಧದ ಎಣ್ಣೆ ತೆಗೆಯುವುದಕ್ಕೆ ಸಂಬಂಧಿಸಿದ ಸಂಶೋಧನೆಯಲ್ಲಿ ತೊಡಗಿ ಶ್ರೀಗಂಧದ ಮರದಿಂದ ಸುಗಂಧ ತೈಲ ತೆಗೆಯುವ ಪ್ರಯತ್ನದಲ್ಲಿ ಯಶಸ್ವಿಯಾಯಿತು. ಗಂಧದ ಎಣ್ಣೆಯ ತಯಾರಿಕೆಯು ಯಶಸ್ವಿಯಾದ ನಂತರ ಸರ್. ಎಮ್. ವಿ ಯವರು 1916 ರಲ್ಲಿ ಬೆಂಗಳೂರಿನಲ್ಲಿ ಮರದ ತೊಗಟೆ ತೆಗೆದು ಚಿಕ್ಕ ಗಾತ್ರಕ್ಕೆ ಶ್ರೀಗಂಧದ ತುಂಡುಗಳನ್ನು ಸಿದ್ಧಪಡಿಸುವ ಘಟಕ ಆರಂಭಿಸಿದರು. ಮರುವರ್ಷ 1917 ರಲ್ಲಿ ಮೈಸೂರಿನ ಅರದನಹಳ್ಳಿಯಲ್ಲಿ (ಈಗಿನ ಅಶೋಕಪುರಂ) ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದರು, 36 ಎಕರೆಗಳ ವಿಶಾಲವಾದ ಪ್ರದೇಶದಲ್ಲಿ ನೆಲೆಗೊಂಡಿರುವ ಶ್ರೀಗಂಧದ ಎಣ್ಣೆ ಕಾರ್ಖಾನೆಯಲ್ಲಿ ಈಗಲೂ ಶ್ರೀಗಂಧದ ಎಣ್ಣೆ, ಅಗರಬತ್ತಿ ಹಾಗೂ ಧೂಪಗಳನ್ನ ತಯಾರಿಸಲಾಗುತ್ತದೆ.
ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ: 1923ರಂದು ಮೈಸೂರು ಐರನ್ ವರ್ಕ್ಸ್ ಅನ್ನು ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಯಿತು. ಇದರ ಮುಖ್ಯ ಉದ್ದೇಶ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಮತ್ತು ಕೆಮ್ಮಣ್ಣುಗುಂಡಿ ಬಳಿ ಇದ್ದ ಶ್ರೀಮಂತ ಕಬ್ಬಿಣದ ಅದಿರು ನಿಕ್ಷೇಪಗಳನ್ನು ಉಪಯೋಗಿಸಿ ಕಬ್ಬಿಣ ಮತ್ತು ಇತರ ಉತ್ಪನ್ನಗಳ ತಯಾರಿಕೆ ಆಗಿತ್ತು. 1989 ರಲ್ಲಿ ಭಾರತ ಉಕ್ಕು ಪ್ರಾಧಿಕಾರವು ಇದನ್ನು ತನ್ನತೆಕ್ಕೆಗೆ ತಗೆದುಕೊಂಡಿತು. ಈಗ ಇದು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (Steel Authority of India Limited -) ವ್ಯಾಪ್ತಿಯಲ್ಲಿದೆ. ಸಂಸ್ಥಾಪಕರನ್ನು ಗೌರವಿಸುವ ಸಲುವಾಗಿ 1975 ರಲ್ಲಿ ಕಂಪನಿಯನ್ನು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ ಎಂದು ಮರುನಾಮಕರಣ ಮಾಡಲಾಗಿದೆ.
ವಿಶ್ವೇಶ್ವರಯ್ಯ ಅವರ ಕೃತಿಗಳ ಪರಿಚಯ:
Memoirs of my working life (ನನ್ನ ವೃತ್ತಿ ಜೀವನದ ನೆನಪುಗಳು ), Reconstructing India ಹಾಗೂ 1902 ರಲ್ಲಿ ವಿಶ್ವೇಶ್ವರಯ್ಯ ನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Present State of Education in Mysore” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು.
ವಿಶ್ವೇಶ್ವರಯ್ಯ ಮತ್ತು ಕನ್ನಡ:
ವಿಶ್ವೇಶ್ವರಯ್ಯನವರು ನಾನಾ ಆಡುಭಾಷೆಗಳನ್ನಾಡುವ ಕನ್ನಡಿಗರನ್ನು ಒಂದೇ ಸೂರಿನಡಿ ಸೇರಿಸಬೇಕೆಂದು ಕರ್ನಾಟಕ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಇದು ಈಗ ಕನ್ನಡ ಸಾಹಿತ್ಯ ಪರಿಷತ್ತು ಎಂದು ಕರೆಯಲಾಗುತ್ತದೆ.
ವಿಶ್ವೇಶ್ವರಯ್ಯನವರ ಪ್ರಮುಖ ಕೊಡುಗೆಗಳು:
ಐದು ದಿನಗಳ ಜೈಲು ವಾಸಕ್ಕೆ ಅಂತ್ಯ 5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More
ಬೆಂಗಳೂರು : ಪ್ರಜ್ವಲ್ ರೇವಣ್ಣ ವಿಚಾರದ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್ನಲ್ಲಿ ಸಂತ್ರಸ್ತೆ… Read More
ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More
ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More
ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More
ಬೆಂಗಳೂರು : ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ಜನಪ್ರಿಯರಾಗಿರುವ ಕನ್ನಡತಿ, ಮಂಡ್ಯದ ಹನಕೆರೆ ಪವಿತ್ರ ಜಯರಾಂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಕರ್ನೂಲು… Read More
This website uses cookies.
Leave a Comment