ಸಾಹಸ ಸಿಂಹ ವಿಷ್ಣುಗೆ ತೆಲುಗು ನಟ ಮಾಡಿದ ಅಪಮಾನ ನೆನಪಿನಿಂದ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ವಿಷ್ಣು ಅಭಿಮಾನಿಗಳ ಮನ ನೋಯಿಸುವ ಮತ್ತೊಂದು ಘಟನೆ ನಡೆದಿದೆ.
ಬೆಂಗಳೂರಿನ ಮಾಗಡಿರಸ್ತೆಯ ಟೋಲ್ಗೇಟ್ ಬಳಿಯಿರುವ ಡಾ. ವಿಷ್ಣುವರ್ದನ್ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ವಿಕಾರ ಮಾಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಎರಡನೇ ಭಾರೀ ಇಂಥ ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಪ್ರತಿಮೆಯನ್ನೇ ಕಿತ್ತುಕೊಂಡು ಹೋಗಿದ್ದನ್ನು ಸ್ಮರಿಸಬಹುದು.
ಇನ್ನುಮೂರು – ನಾಲ್ಕು ದಿನದಲ್ಲಿ ವಿಷ್ಣು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೂ ಮುನ್ನವೇ ಪ್ರತಿಮೆ ವಿರೂಪ ಗೊಳಿಸಿರುವುದು ಅಭಿಮಾನಿಗಳಗೆ ನೋವು ತಂದಿದೆ.