ಹಿರಿಯ ಪತ್ರಕರ್ತ, ಸಾಹಿತಿ ಗೋವಿಂದಯ್ಯ ಕೋರೆಗಾಲ ನಿಧನ

Team Newsnap
0 Min Read

ಹಿರಿಯ ಪತ್ರಕರ್ತ, ಸಾಹಿತಿ ಗೋವಿಂದಯ್ಯ ಕೋರೆಗಾಲ ವಿಧಿವಶರಾದರು. ‌

ಮಂಡ್ಯ ಗಾಂಧಿನಗರ ವಾಟರ್ ಟ್ಯಾಂಕ್ ರಸ್ತೆಯಲ್ಲಿ ವಾಸವಿದ್ದ ಗೋವಿಂದಯ್ಯ, ತಮ್ಮ ಕೊಠಡಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮೃತರ ಪತ್ನಿ ಹಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಇವರಿಗೆ ಮಕ್ಕಳು ಇರಲಿಲ್ಲ.‌ ಏಕಾಂಗಿಯಾಗಿ ಜೀವನ ಮಾಡುತ್ತಿದ್ದರು.

ಭಾರತಿ ಕಾಲೇಜಿನಲ್ಲಿ ಗ್ರಂಥಾಲಯ ಮೇಲ್ವಿಚಾರಕ ರಾಗಿದ್ದ ಇವರು ನಿವೃತ್ತಿ ನಂತರ ಸಂಕೀರ್ತನ ಪಾಕ್ಷಿಕ ಪತ್ರಿಕೆ ನಿರ್ವಹಣೆ ಮಾಡುತ್ತಿದ್ದರು.‌

ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ ಇತ್ತೀಚೆಗೆ ಪತ್ರಿಕಾ ವೃತ್ತಿಗೂ ನಿವೃತ್ತಿ ಘೋಷಿಸಿದ್ದರು.
ಮಳವಳ್ಳಿ ತಾಲೂಕು ಕೋರೆಗಾಲ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

Share This Article
Leave a comment