ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಬೋಜಶೆಟ್ಟಿ (70) ಕೋವಿಡ್ ಗೆ ಹುಬ್ಬಳ್ಳಿಯಲ್ಲಿ ಬಲಿಯಾಗಿದ್ದಾರೆ.
ಸಂತಾಪ:
ಬೋಜಶೆಟ್ಟಿ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮೈಸೂರಿನಲ್ಲಿ ನಡೆದ 34ನೇ ರಾಜ್ಯ ಸಮ್ಮೇಳನದಲ್ಲಿ ಬೋಜಶೆಟ್ಟಿ ಮಾಧ್ಯಮ ಸೇವೆಯನ್ನು ಕೆಯುಡಬ್ಲ್ಯೂಜೆ ಗುರುತಿಸಿ ಸನ್ಮಾನಿಸಿತ್ತು.
ಮೃತರ ಕುಟುಂಬಕ್ಕೆ ಶಾಂತಿ ಸಿಗಲಿ. ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಪ್ರಾರ್ಥಿಸಿದ್ದಾರೆ.