ಪಂಚರತ್ನ ಯಾತ್ರೆ ಮೂಲಕ ರಾಜ್ಯಾದ್ಯಂತ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು. ತಾವು ಮತ್ತೊಮ್ಮೆ ಸಿಎಂ ಗಾದಿಗೇರಲು ಫಿನಿಕ್ಸ್ನಂತೆ ಮೇಲೆ ಬರಲು ದಳಪತಿಗಳು ಶತಾಯಗತಾಯವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನದ ಅಂಗವಾಗಿ ತೆನೆ ಹೊತ್ತ ಮಹಿಳೆಯನ್ನು ರಾಜ್ಯದ ಸಿಂಹಾಸನವೇರುವಂತೆ ಮಾಡುವ ಹಂತದ ಮತ್ತೊಂದು ಹೆಜ್ಜೆಯೇ ಪಂಚರತ್ನ ರಥಯಾತ್ರೆ.
ನಿನ್ನೆ ಪಂಚರತ್ನ ರಥಯಾತ್ರೆಗೆ ಚಾಲನೆ ಕೊಡ್ತಿದ್ದಂತೆ ಇತ್ತ ವರುಣ ಪ್ರವೇಶ ಕೊಟ್ಟ ಪರಿಣಾಮ ರ್ಯಾಲಿಯನ್ನು ಒಂದು ವಾರ ಮುಂದೂಡಲಾಗಿದೆ.
ಈ ಬಗ್ಗೆ ಮುಳಬಾಗಿಲುನಲ್ಲಿ ಮಾತನಾಡಿದ ಹೆಚ್ಡಿಕೆ, ಉಚಿತ ಚಿಕಿತ್ಸೆ, ಶಿಕ್ಷಣ, ವಸತಿ, ರೈತ ಚೈತನ್ಯ, ಮಹಿಳಾ ಸಬಲೀಕರಣ ಕಾರ್ಯಕ್ರಮ ಮಾಡಲಾಗುತ್ತಿದೆ. ಮಳೆ ಆಗಮಿಸಿದ್ದರಿಂದ ಯಾತ್ರೆ ಮೂಂದೂಡಿದ್ದು ವರುಣನ ಸಿಂಚನ ಮೂಲಕ ಪಂಚರತ್ನಕ್ಕೆ ಶುಭ ಸೂಚನೆ ಸಿಕ್ಕಿದೆ. ಮುಳಬಾಗಿಲಿನಿಂದಲೇ ಮತ್ತೆ ರಥಯಾತ್ರೆಗೆ ಚಾಲನೆ ನೀಡುತ್ತೇವೆ ಅಂತ ಹೇಳಿದ್ದಾರೆ. ಅಪ್ಪುಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಭಾವುಕರಾಗಿ ಸ್ವೀಕರಿಸಿದ ಪುನೀತ್ ಪತ್ನಿ ಅಶ್ವಿನಿ
ಜೆಡಿಎಸ್ನ ಪಂಚರತ್ನ ರಥಯಾತ್ರೆಗೆ ಚಾಲನೆ ಜೆಡಿಎಸ್ನ ಮಹಾತ್ವಾಕಾಂಕ್ಷಿ ಯಾತ್ರೆ ಪಂಚರತ್ನಕ್ಕೆ ನಿನ್ನೆ ದಳಪತಿಗಳು ಚಾಲನೆ ಕೊಟ್ಟಿದ್ದಾರೆ. ಕೋಲಾರದ ಕುರುಡುಮಲೆಯಿಂದ ರ್ಯಾಲಿ ಕುರುಡುಮಲೆ ಗಣಪತಿ ದೇವಾಲಯದಲ್ಲಿ ರಥಯಾತ್ರೆ ಯಶಸ್ವಿಗಾಗಿ ವಿಶೇಷ ಪೂಜೆ, ಹೋಮ-ಹವನ ನೆರವೇರಿಸಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಈ ವೇಳೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ನ ಹಲವು ನಾಯಕರು ಭಾಗಿಯಾಗಿದ್ದರು.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ