ಮಾಜಿ ಪ್ರಧಾನಿ ವಾಜಪೇಯಿಗೆ ಸಂಜೆಹೊತ್ತು ಎರಡು ಗ್ಲಾಸ್ ವಿಸ್ಕಿ ಬೇಕಾಗಿತ್ತಂತೆ. ಹಾಗಾಂತ ಎಲ್ಲ ಬಾರ್ಗಳಿಗೆ ವಾಜಪೇಯಿ ಬಾರ್ ಅಂತ ಹಾಕ್ತಿರಾ ಎಂದು ಕಾಂಗ್ರೆಸ್ ಶಾಸಕ ಪಿಯಾಂಕ್ ಖರ್ಗೆ ಬಿಜೆಪಿಯವರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇತ್ತೀಚೆಗೆ, ಕಾಂಗ್ರೆಸ್ನವರು ನೆಹರು ಹುಕ್ಕಾ ಬಾರ್ ತೆರೆಯಲಿ ಎಂದು ನೀಡಿದ್ದ ಹೇಳಿಕೆ ಬಗ್ಗೆ ಶಾಸಕರು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ವಾಗ್ದಾಳಿ ನಡೆಸಿದರು.
ತಾವು ಓದಿದ ಒಂದು ಲೇಖನದಲ್ಲಿ ಈ ವಿಷಯ ಇದ್ದುದನ್ನು ಪ್ರಿಯಾಂಕ್ ಪ್ರಸ್ತಾಪಿಸಿ, ಸಿಗರೇಟ್, ಮದ್ಯಪಾನ ಮಾಡುವುದು ತಪ್ಪಲ್ಲ, ಹಾಗಂತ ನೀವು(ಬಿಜೆಪಿ) ಎಲ್ಲ ಬಾರ್ಗಳಿಗೂ ವಾಜಪೇಯಿ ಹೆಸರು ಇಡುತ್ತೀರಾ ಎಂದು ಕುಹಕದಿಂದ ಕೇಳಿದರು.
ವಾಜಪೇಯಿ ಮಾಂಸಪ್ರಿಯರು. ಮಾಂಸ ಸೇವಿಸುವುದರಿಂದ ಗೌರವ ಕಡಿಮೆಯಾಗುತ್ತಾ? ಹಾಗಾದ್ರೆ ಎಲ್ಲ ಕಸಾಯಿಖಾನೆಗಳಿಗೆ ವಾಜಪೇಯಿ ಹೆಸರು ಇಡಲು ಆಗುತ್ತಾ ಎಂದಿದ್ದಾರೆ.
https://twitter.com/priyankkharge?s=11
- ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ