ದಾವಣಗೆರೆ ಸಮೀಪ ಯು ಟಿ ಖಾದರ್ ಕಾರು ಅಪಘಾತ – ಚಾಲಕನಿಗೆ ಗಂಭೀರ ಗಾಯ – ಖಾದರ್ ಪಾರು

Team Newsnap
0 Min Read
Training Camp for New MLAs: Speaker UT Khadar ನೂತನ ಶಾಸಕರಿಗೆ ತರಬೇತಿ ಶಿಬಿರ : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರಿಗೆ ತರಳುತ್ತಿದ್ದ ಮಾಜಿ ಸಚಿವ ಯು ಟಿ ಖಾದರ್ ಕಾರ್ ದಾವಣಗೆರೆ ಸಮೀಪದ ಆನಗೋಡು ಬಳಿ ಅಪಘಾತ ವಾಗಿದೆ.

ಈ ಘಟನೆಯಲ್ಲಿ ಕಾರು ಚಾಲಕನಿಗೆ ಗಂಭೀರವಾಗಿ ಗಾಯಗಳಾಗಿವೆ. ಕಾರಿನ ಮುಂದಿನ ಭಾಗ ಸಂಪೂರ್ಣ ಜಖಂ ಆಗಿದೆ.
ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಖಾದರ್ ಗೆ ಯಾವುದೇ ಗಾಯಗಳಾಗಿಲ್ಲ. ಅವರು ಮತ್ತೊಂದು ಕಾರಿನಲ್ಲಿ ಪ್ರಯಾಣ ಮಾಡಿದರು.

ಆನುಗೋಡು ಬಳಿ ಖಾದರ್ ಕಾರಿನ ಚಾಲಕ ಕಂಟೈನರ್ ಒಂದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ದಾವಣಗೆರೆ ಜಿಲ್ಲಾ ಎಸ್ಪಿ
ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿದ್ದರು. ದಾವಣಗೆರೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share This Article
Leave a comment