Main News

ಟಿಬೇಟ್‌ನ ‘ದೇಶ ಭ್ರಷ್ಟಸರ್ಕಾರ’ಕ್ಕೆ ಅಮೇರಿಕಾ ಮಾನ್ಯತೆ: ಚೀನಾಗೆ ಸಂಕಷ್ಟ

ಅಮೇರಿಕಾವು ಟಿಬೇಟ್‌ನ ‘ದೇಶಭ್ರಷ್ಟ ಸರ್ಕಾರ’ಕ್ಕೆ ಅಮೇರಿಕಾವು ಮಾನ್ಯತೆ ನೀಡಿ ಟಿಬೇಟ್‌ನ ದೇಶ ಭ್ರಷ್ಟಸರ್ಕಾರದ ಮುಖ್ಯಸ್ಥರಿಗೆ ಆತಿಥ್ಯ ನೀಡಿದೆ. ಅಮೇರಿಕಾದ ಈ ನಡೆ ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಟಿಬೇಟ್‌ನ ದೇಶಭ್ರಷ್ಟ ಸರಗಕಾರದ ಅಧ್ಯಕ್ಷ ಲಾಬ್ಸಾಂಗ್ ಸಾಂಗೇ ಜೊತೆ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರ ನೇಮಿಸಿದ ವಿಶೇಷ ಸಂಯೋಜಕ ರಾಬರ್ಟ್. ಎ. ರೆಸ್ಟ್ರೋ ಅವರು ಸಂವಾದ ನಡೆಸಿದ್ದಾರೆ. ಚೀನಾ ಅಮೇರಿಕಾ ಸಂಯೋಜಕ ರಾಬರ್ಟ್ ಎ. ರೆಸ್ಟ್ರೋ ಅವರನ್ನು ವಿಶೇಷ ಸಂಯೋಜಕರಾಗಿ ನೇಮಕ ಮಾಡಿದ್ದನ್ನು ಚೀನಾ ತೀವ್ರವಾಗಿ ವಿರೋಧಿಸಿತ್ತು. ಅಮೇರಿಕ ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೂ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಹಿಂದೆ ಬುಷ್, ಬಿಲ್ ಕ್ಲಿಂಟನ್, ಬರಾಕ್ ಒಬಾಮಾ ಅವರು ದಲೈ ಲಾಮಾ‌ ಅವರನ್ನು ಚೀನಾದ ವಿರೋಧದ ನಡುವೆಯೂ ಶ್ವೇತ ಭವನಕ್ಕೆ‌ ಕರೆಸಿ ಆತಿಥ್ಯ ನೀಡಿದ್ದರು.

ಈಗ ಟ್ರಂಪ್ ಅವರು ಟಿಬೇಟ್‌ನ ದೇಶಭ್ರಷ್ಟ ಸರ್ಕಾರದ ಅಧ್ಯಕ್ಷರಿಗೆ ಆತಿಥ್ಯ ನೀಡುವ ಮೂಲಕ ಟೊಬೇಟ್ ಸರ್ಕಾರಕ್ಕೆ ಮಾನ್ಯತೆ ನೀಡಿದೆ. ದಲೈ ಲಾಮಾ ಅವರು 1950-51 ರಲ್ಲಿ ಟಿಬೇಟ್‌ನ ಮೇಲೆ ದಾಳಿ ನಡೆಸಿದಾಗ, ದಲೈ ಲಾಮಾ ಅವರು ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ಆಗ ಹಿಮಾಚಲ ಪ್ರದೇಶದಲ್ಲಿ ಭಾರತವಾವರಿಗೆ ಆಶ್ರಯ ನೀಡಿತ್ತು. ನಂತರ ದಲೈ ಲಾಮಾ ಅವರೇ 1959 ಏಪ್ರಿಲ್ 29 ರಂದು ‘ಟಿಬೇಟ್ ದೇಶಭ್ರಷ್ಟ ಸರ್ಕಾರ’ವನ್ನು ರಚಿಸಿದ್ದರು. ಭಾರತ ಸರ್ಕಾರ ಈ ಟಿಬೇಟ್‌ನ ಈ ಸರ್ಕಾರಕ್ಕೆ ಅಧಿಕೃತವಾಗಿ ಮಾನ್ಯತೆ ನೀಡಿಲ್ಲವಾದರೂ, ‘ಅನಧಿಕೃತವಾಗಿ’ ಮಾನ್ಯತೆ ನೀಡಿದೆ.

ಅಮೇರಿಕಾ-ಚೀನಾ ಸಂಬಂಧ ಈಗ ವಿಷಮಗೊಂಡಿರುವದರಿಂದ ಅಮೇರಿಕ ಈ ನಡೆಯನ್ನು ಅನುಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.

Team Newsnap
Leave a Comment
Share
Published by
Team Newsnap

Recent Posts

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024