ಇದೊಂದು ಅಪರೂಪದ ಕಾರ್ಯಕ್ರಮ. ಕಲ್ಯಾಣ ಮಂಟಪದಲ್ಲಿ ಮಂಗಳ ವಾದ್ಯಗಳು ಮೊಳಗುತ್ತಿರುವ ವೇಳೆ ಸಿಂಗಾರಗೊಂಡ ನೂತನ ವಧು – ವರರ ಸಾಕ್ಷಿಯಾಗಿ ವಧುವಿನ ತಂದೆ, ಸಾಹಿತಿ ತ ನಾ ಶಿ ಹಾಗೂ ಹಿರಿಯ ಸಾಹಿತಿ ಬೆಂಗಳೂರಿನ ಜೆ. ಎನ್ . ಜಗನ್ನಾಥ್ ಬರೆದಿರುವ ಕವಿ ಕೃತಿ ಪರಿಚಯದ ಧ್ರುವ ತಾರೆಗಳು ಎಂಬ ಕೃತಿಯನ್ನು ಲೋಕಾಪ೯ಣೆ ಮಾಡಲಾಯಿತು.
ಮಂಡ್ಯದ ಬಂಧೀಗೌಡ ಬಡಾವಣೆಯಲ್ಲಿರುವ ಗಾಯತ್ರಿ ಸಮುದಾಯ ಭವನದಲ್ಲಿ ತಾಲೂಕಿನ ತಡಗವಾಡಿ ಮನೆತನದ ತಡಗವಾಡಿ ನಾರಾಯಣರಾವ್ ಶಿವಕುಮಾರ್ ಹಾಗೂ ಶ್ರೀಮತಿ ಚಂದ್ರಿಕಾ ಇವರ ಮಗಳು ವಿನುತಾ ಹಾಗೂ ಸಂತೋಷ್ ಇವರ ವಿವಾಹೋತ್ಸವದಲ್ಲಿ ಸಾಹಿತ್ಯ ಸಂಭ್ರಮವೂ ವಿಶಿಷ್ಠವಾಗಿ ಜರುಗಿತು.
ಬೆಳಗಾವಿಯ ನ್ಯಾಯಾಲಯದಲ್ಲಿ ಆಡಳಿತಾಧಿಕಾರಿಯಾಗಿರುವ ವಧುವಿನ ತಂದೆ, ಸಾಹಿತಿ ತನಾಶಿ ಎಂಬ ಕಾವ್ಯನಾಮ ಖ್ಯಾತರಾದ ತ.ನಾ.ಶಿವಕುಮಾರ್ ಅವರು ರಚಿಸಿದ ಕನಕದಾಸರ ಹರಿಭಕ್ತಿಸಾರದ ವ್ಯಾಖ್ಯಾನಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.
ಕನಕದಾಸ ಜಯಂತಿಯಂದು ‘ರಕ್ಷಿಸು ನಮ್ಮನನವರತ’ ಸಂದೇಶದ ಹರಿಭಕ್ತಿಸಾರ ಗ್ರಂಥವನ್ನು ತನಾಶಿ ಅವರು ಲೋಕಾರ್ಪಣೆ ಮಾಡಿ ವಧು ಮತ್ತು ವರನಿಗೆ ಕನಕ ಸಂದೇಶ ನೀಡಿ ಹರಸಿದರು.
ಹಿರಿಯ ಲೇಖಕ ಬೆಂಗಳೂರಿನ ಜೆ. ಎನ್ . ಜಗನ್ನಾಥ್ ಅವರು ರಚಿಸಿದ ‘ಧ್ರುವತಾರೆಗಳು’ ಹೆಸರಿನ ಕವಿ ಕೃತಿ ಪರಿಚಯದ ಕೃತಿಯನ್ನು ಲೇಖಕ ಕೊಕ್ಕಡ ವೆಂಕಟ್ರಮಣ ಭಟ್ ಬಿಡುಗಡೆ ಮಾಡಿದರು.
ರಮಾಕಾಂತ ಶೆಣೈ ಅವರು ರಚಿಸಿದ ವಿಷ್ಣು ಸಹಸ್ರನಾಮ ಅರ್ಥವಿವರಣೆ ಗ್ರಂಥವನ್ನು ಧಾರವಾಡದ ದತ್ತಾತ್ರೇಯ ಕುಲಕಣಿ೯ ಲೋಕಾಪ೯ಣೆ ಮಾಡಿದರು.
ಸುನೀಲ್ ಹಳೆಯೂರು ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿವಿಜಿ ಬಳಗದ ೨೫ ಸದಸ್ಯರು ಉಪಸ್ಥಿತರಿದ್ದು ಪುಸ್ತಕ ಲೋಕಾರ್ಪಣೆಗೆ ಸಹಕರಿಸಿದರು. ಹಿರಿಯ ಪತ್ರಕರ್ತ ಕೆ ಎನ್ ರವಿ ಉಪಸ್ಥಿತರಿದ್ದರು.
ನವದೆಹಲಿ ,ಏಪ್ರಿಲ್ 30 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ದಾಖಲಾಗಿದೆ. 24… Read More
ರಾಮನಗರ : ಮೇಕೆದಾಟು (Mekedatu) ಬಳಿಯ ಸಂಗಮದ ಕಾವೇರಿ ನದಿಯಲ್ಲಿ ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ… Read More
ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ (91) ಆರೋಗ್ಯದಲ್ಲಿ ಏರುಪೇರು ಆಗಿದೆ. ವೈದ್ಯರ ಸೂಚನೆ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ಎಸ್.ಎಂ… Read More
ಬೆಂಗಳೂರು: ಮಹಿಳೆಯರ ಮೇಲಿನ ಸತತ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ನಿಂದ ಅಮಾನತು ಮಾಡಲಾಗಿದೆ. ಈ… Read More
ಮೈಸೂರು : ಶ್ರೀನಿವಾಸ್ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ನಾಳೆ ಮಾಡಲಾಗುತ್ತದೆ ಎಂದು ಮಗಳು ಪ್ರತಿಮಾ ಪ್ರಸಾದ್… Read More
ಮೈಸೂರು : ಉದಯಗಿರಿ ಪೊಲೀಸ್ ಠಾಣೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ… Read More
This website uses cookies.
Leave a Comment